
ಮುಂಬೈ/ಬೆಂಗಳೂರು(ಏ.14): ಕಂಪನಿಯ ಸಂಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳ ಒತ್ತಡಕ್ಕೆ ಮಣಿದಿರುವ ದೇಶದ ಅತಿದೊಡ್ಡ ಸಾಫ್ಟ್ವೇರ್ ಕಂಪನಿ, ಬೆಂಗಳೂರು ಮೂಲದ ಇಸ್ಫೋಸಿಸ್, 13 ಸಾವಿರ ಕೋಟಿ ರು. ಹಣವನ್ನು ಷೇರುದಾರರಿಗೆ ಮರಳಿಸಲು ನಿರ್ಧರಿಸಿದೆ.
ಇಸ್ಫೋಸಿಸ್ನ ನಿರ್ದೇಶಕ ಮಂಡಳಿ ಆಡಳಿತ ವೈಫಲ್ಯ ಅನುಭವಿಸಿದೆ ಎಂದು ದೂರಿದ್ದ ಸಂಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳು, ಪ್ರತಿಸ್ಪರ್ಧಿ ಕಂಪನಿ ಟಿಸಿಎಸ್ ಕಳೆದ ಫೆಬ್ರವರಿಯಲ್ಲಿ ಘೋಷಣೆ ಮಾಡಿದ್ದಂತೆ ಇಸ್ಫೋಸಿಸ್ ಕೂಡ ಮಾರುಕಟ್ಟೆಯಿಂದ ಷೇರು ಮರು ಖರೀದಿ ಮಾಡಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ 13 ಸಾವಿರ ಕೋಟಿ ರು.ನಷ್ಟುಮೊತ್ತವನ್ನು ಷೇರುದಾರರಿಗೆ ಹಿಂತಿರುಗಿಸಲು ನಿರ್ಧರಿಸಿದೆ. ಈ ಮಧ್ಯೆ, ಕಾರ್ಪೋರೆಟ್ ಆಡಳಿತ ಕುರಿತಾದ ಸಂಸ್ಥಾಪಕರ ಕಳವಳಗಳನ್ನು ಹೋಗಲಾಡಿಸಲು ರವಿ ವೆಂಕಟೇಶನ್ ಅವರನ್ನು ಸಹ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.