
ಜಕಾರ್ತ: ಇಂಡೋನೇಷ್ಯಾದ ಸುರಬಯಾ ನಗರದಲ್ಲಿ ಚರ್ಚ್ಗಳ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಏಳು ಮಂದಿ ಬಲಿಯಾಗಿದ್ದಾರೆ. ಈ ದುಷ್ಕೃತ್ಯಕ್ಕೆ ದಂಪತಿಯೊಬ್ಬರು ತಮ್ಮ ನಾಲ್ವರು ಮಕ್ಕಳನ್ನು ಬಳಸಿದ್ದರೆಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಒಂಬತ್ತು ಹಾಗೂ 12 ವರ್ಷದ ಇಬ್ಬರ ಹೆಣ್ಣು ಮಕ್ಕಳು, ಇಬ್ಬರು ಹದಿವಯಸ್ಸಿನ ಗಂಡು ಮಕ್ಕಳನ್ನು ಈ ಮಾರಾಣಾಂತಿಕ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ತಾಯಿ ಬಾಂಬ್ ಸ್ಫೋಟಿಸುವಾಗ ಇಬ್ಬರು ಹೆಣ್ಣು ಮಕ್ಕಳು ಆಕೆ ಜತೆಗಿದ್ದರೆಂದು ದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹದಿವಯಸ್ಸಿನ ಇನ್ನಿಬ್ಬರು ಗಂಡು ಮಕ್ಕಳನ್ನು ಮತ್ತೊಂದು ಚರ್ಚ್ ಮೇಲಿನ ದಾಳಿಗೆ ಬಳಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ, 40 ಮಂದಿ ಗಾಯಗೊಂಡಿದ್ದಾರೆ.
ಆತ್ಮಾಹುತಿ ದಾಳಿ ನಡೆಸಿದ ಆರು ಮಂದಿಯೂ ಕೊನೆಯುಸಿರೆಳೆದಿದ್ದಾರೆ. ಐಸಿಸ್ ಅನ್ನು ಬೆಂಬಲಿಸುವ ಉಗ್ರ ಸಂಘಟನೆಗೆ ಈ ಪೋಷಕರು ಸೇರಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ದಾಳಿ ಎಂದು ಕರೆದಿರುವ ಈ ಘಟನೆಗೆ ಐಸಿಸ್ ಹೊಣೆ ಹೊತ್ತು ಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.