ಕಾರಿನಿಂದಿಳಿದ ಇಂಡೋನೇಷ್ಯಾ ರಕ್ಷಣಾ ಸಚಿವರಿಗೆ ಚಾಕು ಇರಿದ ದುಷ್ಕರ್ಮಿ

Published : Oct 11, 2019, 04:47 PM ISTUpdated : Oct 11, 2019, 05:00 PM IST
ಕಾರಿನಿಂದಿಳಿದ ಇಂಡೋನೇಷ್ಯಾ ರಕ್ಷಣಾ ಸಚಿವರಿಗೆ ಚಾಕು ಇರಿದ ದುಷ್ಕರ್ಮಿ

ಸಾರಾಂಶ

ರಕ್ಷಣಾ ಸಚಿವರಿಗೆ ಚೂರಿ ಇರಿದ ದುಷ್ಕರ್ಮಿ| ಸಚಿವರಿಗೆ ಗಂಭೀರ ಗಾಯ| ದಾಳಿಯಲ್ಲಿ ಪೊಲೀಸ್ ಹಾಗೂ ಅಂಗರಕ್ಷಕರಿಗೂ ಗಾಯ

ಇಂಡೋನೇಷ್ಯಾ, (ಅ.11): ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಿಂದ ಪ್ರಭಾವಿತಗೊಂಡ ವ್ಯಕ್ತಿಯೊಬ್ಬ ಇಂಡೋನೇಷ್ಯಾದ ರಕ್ಷಣಾ ಸಚಿವ ವಿರಾಂತೋ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 72 ವರ್ಷದ ಸಚಿವರ ಹೊಟ್ಟೆಗೆ ಎರಡು ಬಾರಿ ಚಾಕುವಿನಿಂದ ಇರಿಯಲಾಗಿದೆ. ಗಂಬೀರವಾಗಿ ಗಾಯಗೊಂಡಿದ್ದ ವಿರಾಂತೋರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. 

ಜಾವಾ ದ್ವೀಪದ ಪಂಡೇಗ್ಲಾಗ್ ನಲ್ಲಿರುವ ಯೂನಿವರ್ಸಿಟಿ ಹೊರಗೆ ಅಚಾನಕ್ಕಾಗಿ ನಡೆದ ಈ ದಾಳಿಯಲ್ಲಿ ರಕ್ಷಣಾ ಸಚಿವರು, ಸ್ಥಳೀಯ ಪೊಲೀಸ್ ಅಧಿಕಾರಿ ಹಾಗೂ ಸಚಿವರ ಇಬ್ಬರು ಅಂಗರಕ್ಷಕರು ಗಾಯಗೊಂಡಿದ್ದಾರೆ.

ವಿರಾಂತೋಗೆ ಶಸ್ತ್ರ ಚಿಕಿತ್ಸೆ

ದಾಳಿ ನಡೆದ ಕೂಡಲೇ ರಕ್ಷಾಣ ಸಚಿವರನ್ನು ಹೆಲಿಕಾಪ್ಟರ್ ಮೂಲಕ ರಾಜಧಾನಿ ಜಕಾರ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಕರಣ ಸಂಬಂಧ ಚಾಕು ಇರಿದ ಎಸ್. ಆಲಮ್ ಶಾ ಹಾಗೂ ಆತನ ಸಹೋದ್ಯೋಗಿ 21 ವರ್ಷದ ಫಿತ್ರೀ ಆ್ಯಂಡ್ರಿಯಾನಾರನ್ನು ಸ್ಥಳದಲ್ಲೇ ಬಂಧಿಸಿ, ವಿಚಾರಣೆ ಆರಂಭಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ