
ವಾಷಿಂಗ್ಟನ್(ಫೆ.26): ಕನ್ಸಾಸ್ ಸಿಟಿಯಲ್ಲಿ ಭಾರತದ ಸ್ಟಾವೇರ್ ತಂತ್ರಜ್ಞ ಶ್ರೀನಿವಾಸ್ ಅವರ ಹತ್ಯೆಯ ಬಳಿಕ ಅಮೆರಿಕದಲ್ಲಿ ತಾವು ಅಸುರಕ್ಷಿತ ಎಂಬ ಭೀತಿಗೆ ಭಾರತೀಯರು ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ‘ಜಾಗೃತಿ ಸಂದೇಶಗಳು’ ರವಾನೆಯಾಗಲಾರಂಭಿಸಿವೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಳ್ವಿಕೆಯ ಆರಂಭವಾದ ನಂತರ ಭಾರತೀಯರು ಜನಾಂಗೀಯ ದ್ವೇಷದ ಭೀತಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ-ಅಮೆರಿಕನ್ ಸಮುದಾಯದ ಸಂಘಟನೆಗಳು, ‘ಭಾರತೀಯರು ಹೇಗೆ ಸಾರ್ವಜನಿಕವಾಗಿ ವರ್ತಿಸಬೇಕು? ವರ್ತಿಸಬಾರದು?’ ಎಂಬ ಸಲಹೆ-ಸೂಚನೆಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿವೆ.
- ಸಾರ್ವಜನಿಕ ಸ್ಥಳಗಳಲ್ಲಿ ಯಾರೊಂದಿಗೂ ಯಾವುದೇ ವಿಚಾರದ ಬಗ್ಗೆ ವಾದಕ್ಕಿಳಿಯಬೇಡಿ.
- ಯಾರಾದರೂ ನಿಮ್ಮ ಜತೆಗಿನ ವಾದಕ್ಕೆ ಪ್ರಚೋದಿಸಿದರೆ, ಅದನ್ನು ನಿರ್ಲಕ್ಷಿಸಿ ಆ ಸ್ಥಳದಿಂದ ಬೇರೆಡೆ ನಿರ್ಗಮಿಸಿ.
- ಸಾರ್ವಜನಿಕವಾಗಿ ಮಾತೃಭಾಷೆಯಲ್ಲಿ ಮಾತನಾಡಲು ಮುಂದಾಗುವುದರಿಂದ ಅಪಾಯವೇ ಹೆಚ್ಚು, ಅಲ್ಲದೆ, ಅದನ್ನು ತಪ್ಪಾಗಿ ಭಾವಿಸಲಾಗುತ್ತದೆ. ಹಾಗಾಗಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುವುದು ಒಳಿತು.
- ಪ್ರತ್ಯೇಕವಾಗಿರುವ ಸ್ಥಳಗಳ ಮೇಲೆ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಹಾಗಾಗಿ, ಒಬ್ಬರೇ ಎಲ್ಲಿಗೂ ಹೋಗುವ ಗೋಜಿಗೆ ಮುಂದಾಗಬೇಡಿ.
- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡಲು ಮೀನಮೇಷ ಎಣಿಸಲೇಬೇಡಿ. ಇಂಥ ಸಂದರ್ಭದಲ್ಲಿ ಅಕಾರಿಗಳು ಬಂದು ನಿಮ್ಮನ್ನು ಅಪಾಯದಿಂದ ಪಾರು ಮಾಡಲು ಅನುಕೂಲವಾದೀತು.
- ನೀವು ವಾಸವಾಗಿರುವ ಸುತ್ತಮುತ್ತಲ ವಾತಾವರಣದ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ಅನುಮಾನಾಸ್ಪದ ಘಟನೆಗಳು ನಿಮ್ಮ ಗಮನಕ್ಕೆ ಬಂದರೆ, ಅದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತನ್ನಿ.
- ಸಾರ್ವಜನಿಕವಾಗಿ ಇಂಗ್ಲಿಷಲ್ಲೇ ಮಾತಾಡಿ, ಮಾತೃಭಾಷೆ ಬೇಡ
- ಯಾರೊಂದಿಗೂ ಯಾವುದೇ ವಿಷಯದ ಬಗ್ಗೆ ವಾದ ಮಾಡದಿರಿ
- ಒಬ್ಬರೇ ಎಲ್ಲಿಗೂ ಹೋಗದಿರಿ. ಅಗತ್ಯವಿದ್ದರೆ ಪೊಲೀಸರಿಗೆ ಕರೆ ಮಾಡಿ
- ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಶಂಕಾಸ್ಪದ ವರ್ತನೆ ಕಂಡರೆ ದೂರು ಕೊಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.