ಸೈಲೆಂಟಾಗಿ ಪಾಕಿಸ್ತಾನಕ್ಕೆ ಭರ್ಜರಿ ಏಟು ಕೊಟ್ಟ ಭಾರತ

Published : Aug 12, 2019, 12:47 AM IST
ಸೈಲೆಂಟಾಗಿ ಪಾಕಿಸ್ತಾನಕ್ಕೆ ಭರ್ಜರಿ ಏಟು ಕೊಟ್ಟ ಭಾರತ

ಸಾರಾಂಶ

ಭಾರತದ ರಾಯಭಾರಿಯನ್ನು ಹಿಂದಕ್ಕೆ ಕಳಿಸಿ ಸಲ್ಲದ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಸದ್ದಿಲ್ಲದೆ ಒಂದು ಏಟು ನೀಡಿದೆ.

ನವದೆಹಲಿ[ ಆ. 11]  ಭಾರತದ ಅಂತಾರಾಷ್ಟ್ರೀಯ ಗಡಿ ತನಕ ಸಾಗುತ್ತಿದ್ದ ಸಂಜೌತ ಎಕ್ಸ್ ಪ್ರೆಸ್ ರೈಲನ್ನು ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದ್ದು ಸದ್ದಿಲ್ಲದೆ ಏಟು ನೀಡಿದೆ.

ಸಂಜೌತ ಎಕ್ಸ್ ಪ್ರೆಸ್ ಭಾನುವಾರಗಳಂದು ದೆಹಲಿಯಿಂದ ಅಟ್ಟಾರಿ ತನಕ ತೆರಳಿ, ವಾಪಸಾಗುತ್ತಿತ್ತು. ಇನ್ನು ಪಾಕಿಸ್ತಾನವು ಲಾಹೋರ್ ನಿಂದ ಅಟ್ಟಾರಿ ತನಕ ರೈಲು ಸೇವೆ ಒದಗಿಸಿತ್ತು. ಅಟ್ಟಾರಿ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಬದಲಾವಣೆ ಮಾಡಿಕೊಳ್ಳುತ್ತಿದ್ದರು.

ಲಾಹೋರ್ ಮತ್ತು ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಸಂಜೌತ ಎಕ್ಸ್ ಪ್ರೆಸ್ ಸಂಖ್ಯೆ 14607/14608 ಅನ್ನು ಪಾಕಿಸ್ತಾನವು ಸ್ಥಗಿತಗೊಳಿಸಿದ ಮೇಲೆ ಆ ರೈಲಿಗೆ ಹೊಂದಿಕೊಂಡಂತೆ ದೆಹಲಿ- ಆಟ್ಟಾರಿ ಮಧ್ಯೆ ಚಲಿಸುತ್ತಿದ್ದ ರೈಲು ಸಂಖ್ಯೆ 14001/14002 ಅನ್ನು ರದ್ದು ಮಾಡಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಹಲವಾರು ಬಾಲಿವುಡ್ ಸಿನಿಮಾಗಳಲ್ಲಿಯೂ ಸಂಜೌತ ರೈಲನ್ನು ಇಟ್ಟುಕೊಂಡೆ ಕತೆ ಹಣೆಯಲಾಗಿದ್ದು ಕಾಣಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!