
ನವದೆಹಲಿ(ಏ.21): ಭಾರತ ಅರುಣಾಚಲಾ ಪ್ರದೇಶ ವಿಷಯದಲ್ಲಿ ದಲೈಲಾಮಾ ಕಾರ್ಡ್ ಬಳಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಚೀನಾದ ಸರ್ಕಾರಿ ಸ್ಯಾಮ್ಯದ ಪತ್ರಿಕೆಯಾದ 'ಗ್ಲೋಬಲ್ ಟೈಮ್ಸ್' ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಎಚ್ಚರಿಸಲಾಗಿದೆ.
ಭಾರತ ಹಾಗೂ ಚೀನಾ ನಡುವೆ ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಗಡಿ ವಿವಾದದ ಸಮಸ್ಯೆ ಹಲವು ವರ್ಷಗಳಿಂದ ಇದೆ. ಈ ಹಿನ್ನಲೆಯಲ್ಲಿ ಭಾರತ ವಿವಾದಿತ ಬೌದ್ಧ ಧರ್ಮ'ಗುರು ದಲೈಲಾಮಾ'ರನ್ನು ಈ ಪ್ರದೇಶಕ್ಕೆ ಭೇಟಿ ವಿವಾದಿತ ಪ್ರದೇಶ ತನ್ನದೆಂದು ವಾದಿಸುತ್ತಿದೆ' ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ತಿಳಿಸಿದೆ.
ಎರಡೂ ದೇಶಗಳ ಮಧ್ಯ 90 ಸಾವಿರ ಚ.ಕಿ.ಮೀ ಪ್ರದೇಶಕ್ಕೆ ಸಂಬಂಧಿಸಿದಂತೆ ಗಡಿವಿವಾದವಿದೆ. ಚೀನಾ ಅಲ್ಲಿನ ದಕ್ಷಿಣ ಟೆಬಿಟ್ ಪ್ರದೇಶವನ್ನು ತನ್ನದೆಂದು ಬಹುವರ್ಷಗಳಿಂದ ವಾದಿಸುತ್ತಿದೆ. ದಲೈಲಾಮ ಭೇಟಿ ನಂತರ 2 ದಿನಗಳ ಹಿಂದಷ್ಟೆ ವಿವಾದಿತ 6 ಪ್ರದೇಶಗಳಿಗೆ ತನ್ನ ದೇಶದ ಅಧಿಕೃತ ಹೆಸರಿನ್ನಿಟ್ಟಿರುವುದು ವಿವಾದ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.