ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಬಿಎಸ್'ವೈಗೆ ಟಾಂಗ್ ನೀಡಿದ ಈಶ್ವರಪ್ಪ

Published : Apr 21, 2017, 03:10 AM ISTUpdated : Apr 11, 2018, 12:53 PM IST
ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಬಿಎಸ್'ವೈಗೆ ಟಾಂಗ್ ನೀಡಿದ ಈಶ್ವರಪ್ಪ

ಸಾರಾಂಶ

ಬೈ ಎಲೆಕ್ಷನ್ 'ನಲ್ಲಿ ಸೋತು ಸುಣ್ಣವಾದ ಬಳಿಕ ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ತಮ್ಮ ಅಸಮಾಧಾನ, ಸಿಟ್ಟು ಹೊರಹಾಕುವಾಗ ಬಳಸಿಕೊಳ್ಳುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವೇದಿಕೆಯಿಂದಲೇ ಈಶ್ವರಪ್ಪ, ಯಡಿಯೂರಪ್ಪ ಅಂಗಳಕ್ಕೆ ಅಸಮಾಧಾನದ ಬಾಂಬ್ ಎಸೆದಿದ್ದಾರೆ.

ಬೆಂಗಳೂರು(ಎ.21): ಬೈ ಎಲೆಕ್ಷನ್ 'ನಲ್ಲಿ ಸೋತು ಸುಣ್ಣವಾದ ಬಳಿಕ ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ತಮ್ಮ ಅಸಮಾಧಾನ, ಸಿಟ್ಟು ಹೊರಹಾಕುವಾಗ ಬಳಸಿಕೊಳ್ಳುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವೇದಿಕೆಯಿಂದಲೇ ಈಶ್ವರಪ್ಪ, ಯಡಿಯೂರಪ್ಪ ಅಂಗಳಕ್ಕೆ ಅಸಮಾಧಾನದ ಬಾಂಬ್ ಎಸೆದಿದ್ದಾರೆ.

ಹೀಗಂತಾ ರಾಯಣ್ಣ ಬ್ರಿಗೇಡ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಉಪಚುನಾವಣಾ ಸೋಲಿಗೆ ಯಡಿಯೂರಪ್ಪ ಅವ್ರಿಗೆ ಟಾಂಗ್ ನೀಡಿದ್ರು. ಬಿಜೆಪಿ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಗೊಂದಲ ಬಗೆಹರಿಸಿಕೊಳ್ಳಲು ಬಿಎಸ್‌ವೈ  ಮರುಳಿಧರ್ ರಾವ್ ಒಳಗೊಂಡ ಸಮಿತಿ ರಚಿಸಲಾಗಿದೆ. ಆದರೆ ಈ ಸಮಿತಿ ಒಮ್ಮೆಯೂ ಸಭೆ ನಡೆಸಿಲ್ಲ. ಇದು ಪಕ್ಷ ವಿರೋಧಿ ಅಲ್ಲವೇ ಎನ್ನುವುದು ಈಶ್ವರಪ್ಪನವರ ವಾದ.

ಈ ಮಧ್ಯೆ ಅತೃಪ್ತರು ಇದೇ 27ರಂದು ನಡೆಸುವ ಸಭೆಗೆ ಹೋಗೋದಾಗಿ ಈಶ್ವರಪ್ಪ ಹೇಳಿದ್ರು. ಮೇ 6 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದ್ದು ಅವರ ಸಮ್ಮುಖದಲ್ಲೇ ಇವರಿಬ್ಬರ ನಡುವಿನ ಒಳಜಗಳ ಇತ್ಯರ್ಥವಾಗತ್ತಾ ಅಥವಾ ಮುಗಿಯದ ಕಥೆಯಾಗತ್ತಾ ಕಾದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!