ದಕ್ಷಿಣ ಭಾರತದಲ್ಲಿ ರಹಸ್ಯಅಣು ನಗರಿ !

Published : Feb 09, 2017, 06:22 PM ISTUpdated : Apr 11, 2018, 12:38 PM IST
ದಕ್ಷಿಣ ಭಾರತದಲ್ಲಿ ರಹಸ್ಯಅಣು ನಗರಿ !

ಸಾರಾಂಶ

ಭಾರತವು ದಕ್ಷಿಣ ಭಾರತದಲ್ಲಿ ಅಣು ಶಸ್ತಸ್ತ್ರಗಳನ್ನು ಕೂಡಿಟ್ಟುಕೊಂಡು ರಹಸ್ಯ ಅಣು ನಗರಿ ನಿರ್ಮಿಸುತ್ತಿದೆ. ಇದರಿಂದ ಈ ಭಾಗದ ಭಾವೈಕ್ಯದ ಸಮತೋಲನದಲ್ಲಿ ಏರುಪೇರಾಗುತ್ತಿದೆ’

ಇಸ್ಲಾಮಾಬಾದ್/ನವದೆಹಲಿ(ಫೆ.09): ಭಾರತ ಸರ್ಕಾರವು ದಕ್ಷಿಣ ಭಾರತದಲ್ಲಿ ‘ರಹಸ್ಯ ಪರಮಾಣು ನಗರ’ವೊಂದನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ಗುರುವಾರ ನೇರ ಆರೋಪ ಮಾಡಿದೆ. ಈ ಆರೋಪದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯವು ‘ಇದೊಂದು ಪಾಕಿಸ್ತಾನದ ಕಲ್ಪನೆ’ ಎಂದು ಆರೋಪವನ್ನು ತಿರಸ್ಕರಿಸಿದೆ.

ಪಾಕ್ ವಿದೇಶಾಂಗ ವಕ್ತಾರ ನಫೀಸ್ ಝಕಾರಿಯಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತವು ದಕ್ಷಿಣ ಭಾರತದಲ್ಲಿ ಅಣು ಶಸ್ತಸ್ತ್ರಗಳನ್ನು ಕೂಡಿಟ್ಟುಕೊಂಡು ರಹಸ್ಯ ಅಣು ನಗರಿ ನಿರ್ಮಿಸುತ್ತಿದೆ. ಇದರಿಂದ ಈ ಭಾಗದ ಭಾವೈಕ್ಯದ ಸಮತೋಲನದಲ್ಲಿ ಏರುಪೇರಾಗುತ್ತಿದೆ’ ಎಂದು ಆರೋಪಿಸಿದರು.

ಝಕಾರಿಯಾ ಅವರು ದಕ್ಷಿಣ ಭಾರತದ ಯಾವ ನಗರಿ ಅದು ಎಂದು ಹೇಳಲಿಲ್ಲ. ಆದರೆ, ಆ್ಯಡ್ರಿಯನ್ ಲೆವಿ ಎಂಬ ಲೇಖಕರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬಗ್ಗೆ ಪುಸ್ತಕವೊಂದನ್ನು ಬರೆದು, ‘ಕರ್ನಾಟಕದ ಚಳ್ಳಕೆರೆ ಬಳಿ ಭಾರತ ‘ರಹಸ್ಯ ಅಣು ನಗರಿ’ನಿರ್ಮಿಸುತ್ತಿದೆ ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಚಳ್ಳಕೆರೆಯನ್ನು ಉದ್ದೇಶಿಸಿಯೇ ಈ ಆರೋಪ ಮಾಡಿದೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?