ಶಾರುಕ್ ಬೇಡ, ಶಾಹಿದ್ ಬೇಡ; ನಾನ್ಯಾಕೆ ಬೇಡ? ಸಚಿವರ ಮಾತಿಗೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು

Published : Sep 26, 2017, 05:41 PM ISTUpdated : Apr 11, 2018, 01:01 PM IST
ಶಾರುಕ್ ಬೇಡ, ಶಾಹಿದ್ ಬೇಡ; ನಾನ್ಯಾಕೆ ಬೇಡ? ಸಚಿವರ ಮಾತಿಗೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು

ಸಾರಾಂಶ

ಸಭೆ ಅಂತ್ಯದಲ್ಲಿ ನಿತಿನ್ ಗಡ್ಕರಿ ನನಗೇನು ಕಮ್ಮಿಯಾಗಿದೆ, ನಾನೇ ಜಾಹೀರಾತು ಮಾಡಬಹುದಲ್ಲ, ನಾನೇಕೆ ಬೇಡ ಎಂದು ಕೇಳಿದರಂತೆ. ಅಧಿಕಾರಿಗಳು ಎಂದಾದರೂ ಬಾಸ್‌'ಗೆ ಇಲ್ಲ ಎನ್ನುವುದುಂಟೇ. ಹೌದು ಸಾರ್ ನೀವೇ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದರಂತೆ.

ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಅಭಿಯಾನ ನಡೆಸಲಿದೆಯಂತೆ. ಇದಕ್ಕಾಗಿ ಜಾಹೀರಾತು ನಿರ್ಮಿಸಲು ಯಾರನ್ನು ಕರೆತರುವುದು ಸೂಕ್ತ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರಂತೆ. ಆಗ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣಬೀರ್ ಕಪೂರ್, ಶಾಹಿದ್ ಕಪೂರ್ ಹೀಗೆ ಅನೇಕ ಹೆಸರುಗಳು ಚರ್ಚೆಗೆ ಬಂದವಂತೆ. ಆದರೆ ಯಾವ ಹೆಸರು ಹೇಳಿದರೂ ನಿತಿನ್ ಗಡ್ಕರಿ ಮಾತ್ರ ಇವರು ಬೇಡ ಎಂದು ತಲೆ ಅಲ್ಲಾಡಿಸುತ್ತಿದ್ದರಂತೆ. ಕೊನೆಗೆ ಸಭೆ ಅಂತ್ಯದಲ್ಲಿ ನಿತಿನ್ ಗಡ್ಕರಿ ನನಗೇನು ಕಮ್ಮಿಯಾಗಿದೆ, ನಾನೇ ಜಾಹೀರಾತು ಮಾಡಬಹುದಲ್ಲ, ನಾನೇಕೆ ಬೇಡ ಎಂದು ಕೇಳಿದರಂತೆ. ಅಧಿಕಾರಿಗಳು ಎಂದಾದರೂ ಬಾಸ್‌'ಗೆ ಇಲ್ಲ ಎನ್ನುವುದುಂಟೇ. ಹೌದು ಸಾರ್ ನೀವೇ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ