ಯಡಿಯೂರಪ್ಪ ಬಹುತ್ ಪಾಪ್ಯುಲರ್, ಲೇಕಿನ್... ಇಂಡಿಯಾ ಗೇಟ್ ಇನ್'ಸೈಡ್ ಸ್ಟೋರಿ

Published : Aug 29, 2017, 04:16 PM ISTUpdated : Apr 11, 2018, 12:58 PM IST
ಯಡಿಯೂರಪ್ಪ ಬಹುತ್ ಪಾಪ್ಯುಲರ್, ಲೇಕಿನ್... ಇಂಡಿಯಾ ಗೇಟ್ ಇನ್'ಸೈಡ್ ಸ್ಟೋರಿ

ಸಾರಾಂಶ

ಕರ್ನಾಟಕಕ್ಕೆ ಬಂದು ಹೋದ ಮೇಲೆ ಬಿಜೆಪಿ ಪರಿಸ್ಥಿತಿ ನೋಡಿ ಶಾ ಅಸಮಾಧಾನಗೊಂಡಿದ್ದಾರಂತೆ. ಈ ಸಂದರ್ಭದಲ್ಲಿ ಸಂಘ ನಾಯಕರನ್ನು ಭೇಟಿಯಾಗಿದ್ದ ಅಮಿತ್ ಶಾ, "ಯಡಿಯೂರಪ್ಪ ಬಹುತ್ ಪಾಪ್ಯುಲರ್ ಹೈ, ಲೇಕಿನ್ ಆಜುಬಾಜು ಮೇ ಗಡ್‌ಬಡಿ ಹೈ" ಎಂದು ಹೇಳಿದ್ದಾರಂತೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿನ ಬಿಜೆಪಿ ಸ್ಥಿತಿಗತಿ ನೋಡಿ ದಂಗಾಗಿ ಹೋಗಿದ್ದು, ಎರಡು ಪ್ರತ್ಯೇಕ ಏಜೆನ್ಸಿಗಳಿಂದ ಸರ್ವೇ ಮಾಡಿಸಿ ವರದಿ ಕೊಡಲು ಹೇಳಿದ್ದಾರಂತೆ. ಅಂದ ಹಾಗೆ ಅಮಿತ್ ಶಾ ಬಳಿ ಸದ್ಯಕ್ಕೆ ಇರುವ ವರದಿಗಳ ಪ್ರಕಾರ ಬಿಜೆಪಿ ನೂರು ಸ್ಥಾನ ದಾಟುವುದು ಕಷ್ಟ ಎನ್ನುವ ಗುಮಾನಿ ಇದೆ. ಕಾಂಗ್ರೆಸ್ ಕೂಡ ಅದೇ ಹುರುಪಿನಲ್ಲಿ ಇದೆ. ಅಮಿತ್ ಶಾ ಚುನಾವಣೆ ವೇಳೆ ನಾನೇ ಬಂದು ಕರ್ನಾಟಕದಲ್ಲಿ ವಾಸ್ತವ್ಯ ಹೂಡುತ್ತೇನೆ, ಇಲ್ಲವಾದಲ್ಲಿ ಕಷ್ಟವಿದೆ ಎಂದು ರಾಜ್ಯದ ಸಂಘ ನಾಯಕರ ಬಳಿ ಹೇಳಿಕೊಂಡಿದ್ದಾರಂತೆ.

ಯಡಿಯೂರಪ್ಪ ಜನಪ್ರಿಯ, ಆದರೆ...
2016ರಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಯಡಿಯೂರಪ್ಪ ಅವರನ್ನು ನೇಮಿಸುವ ಸಂದರ್ಭದಲ್ಲಿ ಸ್ವತಃ ಅಮಿತ್ ಶಾ ಮತ್ತು ರಾಮಲಾಲ್ ಅವರು ಸಂತೋಷ್‌'ರನ್ನು ಕರೆದು ಯಡಿಯೂರಪ್ಪ ಬಗ್ಗೆ ಅಭಿಪ್ರಾಯ ಕೇಳಿದ್ದರಂತೆ. ಆಗ ಸಂತೋಷ್ ಅವರು, ಈಗಲೇ ಯಡಿಯೂರಪ್ಪನವರ ಕೈಗೆ ಪಕ್ಷದ ಸಂಘಟನೆ ಕೊಡಬೇಡಿ, ಚುನಾವಣೆಗೆ ಮೊದಲು ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ. ಆದರೆ ಈಗ ಒಂದೋ ಜೋಶಿ ಅವರನ್ನು ಮುಂದುವರೆಸಿ, ಇಲ್ಲವೇ ಸಿಟಿ ರವಿ ಅವರಿಗೆ ಜವಾಬ್ದಾರಿ ಕೊಡಿ ಎಂದು ಹೇಳಿದ್ದರಂತೆ. ಆದರೆ ಲಿಂಗಾಯತ ಫ್ಯಾಕ್ಟರ್ ಕಾರಣಕ್ಕಾಗಿ ಅಮಿತ್ ಶಾ ಅವರು ಯಡಿಯೂರಪ್ಪ ಹೆಸರಿಗೆ ಹಸಿರು ನಿಶಾನೆ ಕೊಟ್ಟಿದ್ದರು. ಆದರೆ ಈಗ ಕರ್ನಾಟಕಕ್ಕೆ ಬಂದು ಹೋದ ಮೇಲೆ ಬಿಜೆಪಿ ಪರಿಸ್ಥಿತಿ ನೋಡಿ ಶಾ ಅಸಮಾಧಾನಗೊಂಡಿದ್ದಾರಂತೆ. ಈ ಸಂದರ್ಭದಲ್ಲಿ ಸಂಘ ನಾಯಕರನ್ನು ಭೇಟಿಯಾಗಿದ್ದ ಅಮಿತ್ ಶಾ, "ಯಡಿಯೂರಪ್ಪ ಬಹುತ್ ಪಾಪ್ಯುಲರ್ ಹೈ, ಲೇಕಿನ್ ಆಜುಬಾಜು ಮೇ ಗಡ್‌ಬಡಿ ಹೈ" ಎಂದು ಹೇಳಿದ್ದಾರಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?