ಭಾರತದ ಮೇಲೇ ಆರೋಪ ಹೊರಿಸಿದ ವಿಜಯ್ ಮಲ್ಯ!

Published : Dec 16, 2018, 10:07 AM IST
ಭಾರತದ ಮೇಲೇ ಆರೋಪ ಹೊರಿಸಿದ ವಿಜಯ್ ಮಲ್ಯ!

ಸಾರಾಂಶ

ನನ್ನ ಗಡೀಪಾರಿಗೆ ಮುತುವರ್ಜಿ ವಹಿಸಿದಷ್ಟುಸಾಲ ವಸೂಲಿಗೆ ಭಾರತ ಮುಂದಾಗಲಿಲ್ಲ: ಮಲ್ಯ

ಲಂಡನ್‌[ಡಿ.16]: ಭಾರತೀಯ ಬ್ಯಾಂಕ್‌ಗಳಲ್ಲಿ ನಾನು ಮಾಡಿದ ಸಾಲ ವಸೂಲಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಭಾರತ ಸರ್ಕಾರ ನನ್ನ ಗಡೀಪಾರು ವಿಚಾರದ ಬಗ್ಗೆಯೇ ದೃಷ್ಟಿ ನೆಟ್ಟಿತ್ತು ಎಂದು ಬ್ರಿಟನ್‌ ಕೋರ್ಟ್‌ನಿಂದ ಗಡೀಪಾರು ಆದೇಶಕ್ಕೆ ಗುರಿಯಾದ ಮದ್ಯದೊರೆ ವಿಜಯ್‌ ಮಲ್ಯ ಅವರು ಹೇಳಿದ್ದಾರೆ.

ಇ-ಮೇಲ್‌ ಮೂಲಕ ಎನ್‌ಡಿಟಿವಿ ನಡೆಸಿದ ಸಂದರ್ಶನಕ್ಕೆ ಉತ್ತರಿಸಿರುವ ವಿಜಯ್‌ ಮಲ್ಯ ಅವರು, ತಮ್ಮನ್ನು ಬ್ರಿಟನ್‌ನಿಂದ ಗಡೀಪಾರು ಮಾಡಿದ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿಗೆ ಹೋಗಲು ಮುಕ್ತವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ, 2016ಕ್ಕಿಂತ ಮುಂಚಿನಿಂದಲೂ ಸಾಲ ಮರುಪಾವತಿ ಮಾಡುವುದಾಗಿ ಸುಪ್ರೀಂ ಕೋರ್ಟ್‌ ಬಳಿಯೂ ಹೇಳಿಕೊಂಡೇ ಬಂದಿದ್ದೇನೆ. ಜೊತೆಗೆ, ನನ್ನ ಆಸ್ತಿಯನ್ನು ಮಾರಾಟ ಮಾಡಿ, ನೌಕರರಿಗೆ ವೇತನ, ಬ್ಯಾಂಕ್‌ಗಳ ಸಾಲ ಹಾಗೂ ಇತರ ಸಾಲ ತೀರಿಸುವುದಾಗಿಯೂ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ನನ್ನ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ, ನನ್ನ ಆಫರ್‌ಗಳನ್ನು ತಿರಸ್ಕರಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು ಎಂದು ಭಾರತ ಸರ್ಕಾರದ ವಿರುದ್ಧ ಮಲ್ಯ ಪರೋಕ್ಷ ಆರೋಪ ಮಾಡಿದ್ದಾರೆ.

ಈ ಹೇಳಿಕೆ ನೀಡುವ ಮೂಲಕ ವಿಜಯ್ ಮಲ್ಯ ಭಾರತದ ಮೇಲೇ ಗೂಬೆ ಕೂರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು