ವಿಶ್ವಸಂಸ್ಥೆಯಲ್ಲಿ ಪಾಕ್‌ ಮಾನ ಹರಾಜು ಹಾಕಿದ ಭಾರತದ ದಿಟ್ಟೆ ಈನಂ ಗಂಭೀರ್!

By Suvarna Web DeskFirst Published Sep 22, 2017, 1:29 PM IST
Highlights

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದ ಪಾಕ್‌ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಗೆ ಭಾರತ ತಕ್ಕ ತಿರುಗೇಟು ನೀಡಿದೆ.

ನವದೆಹಲಿ(ಸೆ.22): ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದ ಪಾಕ್‌ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಗೆ ಭಾರತ ತಕ್ಕ ತಿರುಗೇಟು ನೀಡಿದೆ.

ಪಾಕಿಸ್ತಾನ ಈಗ 'ಟೆರೆರಿಸ್ತಾನ'ವಾಗಿ ಮಾರ್ಪಟಿದೆ ಎಂದು ಭಾರತ ಕುಟುಕಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡತನಾಡಿದ ವಿಶ್ವಸಂಸ್ಥೆಯ ಭಾರತದ ಮೊದಲ ಕಾಯಂ ಕಾರ್ಯದರ್ಶಿ ಈನಂ ಗಂಭೀರ್!​ ಪಾಕಿಸ್ಥಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ''ಟೆರರಿಸ್ಥಾನ್‌'' ಆಗಿದ್ದು ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ'ಎಂದು ಕಿಡಿ ಕಾರಿದ್ದಾರೆ.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುವುದನ್ನು ಪಾಕಿಸ್ತಾನ ಯಾವತ್ತೂ ಮರೆಯಬಾರದು. ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುತ್ತದೆ. ಆದರೂ, ಭಾರತದ ಪ್ರಾದೇಶಿಕ ಸಮಗ್ರತೆಯನ್ನು ತಗ್ಗಿಸುವಲ್ಲಿ ಪಾಕ್‌ ಯಶಸ್ವಿಯಾಗುವುದಿಲ್ಲ' ಎಂದು ಭಾರತ ಪಾಕ್‌ಗೆ ತಿರುಗೇಟು ನೀಡಿದೆ

 

click me!