ಬಿಜೆಪಿ ಪಾಳೇಯಕ್ಕೆ ಸೇರಿಕೊಂಡ ಮೈತ್ರಿ ಬೆಂಬಲಿಸಿದ್ದ ಶಾಸಕ

Published : Jul 18, 2019, 12:24 PM ISTUpdated : Jul 18, 2019, 12:34 PM IST
ಬಿಜೆಪಿ ಪಾಳೇಯಕ್ಕೆ ಸೇರಿಕೊಂಡ ಮೈತ್ರಿ ಬೆಂಬಲಿಸಿದ್ದ ಶಾಸಕ

ಸಾರಾಂಶ

ರಾಜೀನಾಮೆ ನೀಡಿ, ಸಚಿವ ಸ್ಥಾನವನ್ನೂ ತೊರೆದ ಶಾಸಕ ಇದೀಗ ಬಿಜೆಪಿ ಪಾಳಯದೊಂದಿಗೆ ತೆರಳಿದ್ದಾರೆ. ಸದನಕ್ಕೂ ಗೈರಾಗಿದ್ದಾರೆ. 

ಬೆಂಗಳೂರು [ಜು.18] : ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿಯಲು ವಿಶ್ವಾಸ ಮತ ಯಾಚನೆ ಮೊರೆ ಹೋಗಿದೆ. ಇತ್ತ ಮೈತ್ರಿ ಪಾಳಯಕ್ಕೆ ಕೈ ಕೊಟ್ಟು ತೆರಳಿದ್ದ ಎಚ್. ನಾಗೇಶ್ ಬಿಜೆಪಿ ಗುಂಪು ಸೇರಿದ್ದಾರೆ. 

ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ಜೊತೆಗೆ ಎಚ್. ನಾಗೇಶ್ ತೆರಳಿದ್ದಾರೆ. ಅಲ್ಲದೇ ಸದನಕ್ಕೆ ಬಾರದಿರಲು ಕೂಡ ನಿರ್ಧಾರ ಮಾಡಿಯೇ ತೆರಳಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋಸ್ತಿ ನಾಯಕರು ಮನವೊಲಿಕೆಗೆ ಎಷ್ಟೇ ಯತ್ನಿಸಿದರೂ ಕೂಡ ಇದಕ್ಕೆ ಬಗ್ಗದ ನಾಗೇಶ್ ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. 

ಇತ್ತ ಅತೃಪ್ತತೆಯಿಂದ ಮುಂಬೈ ಸೇರಿರುವ ಶಾಸಕರೂ ಕೂಡ ಸದನಕ್ಕೆ ಗೈರಾಗಿದ್ದು, ಸರ್ಕಾರಕ್ಕೆ ಮತ್ತಷ್ಟು ಆತಂಕ ತಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ