ಬಿಜೆಪಿಯಿಂದ ವಿಭಜನೆ ರಾಜಕೀಯ: ಮೋದಿ ಸರ್ಕಾರದ ನೀತಿ ಖಂಡಿಸಿದ ರಾಹುಲ್ ಗಾಂಧಿ

Published : Mar 08, 2018, 09:50 PM ISTUpdated : Apr 11, 2018, 12:43 PM IST
ಬಿಜೆಪಿಯಿಂದ ವಿಭಜನೆ ರಾಜಕೀಯ: ಮೋದಿ ಸರ್ಕಾರದ ನೀತಿ ಖಂಡಿಸಿದ ರಾಹುಲ್ ಗಾಂಧಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ವಿಭಜಿಸಿ ಚುನಾವಣೆಗಳನ್ನು ಗೆಲ್ಲುತ್ತಿವೆ.

ಸಿಂಗಾಪುರ(ಮಾ.08): ಜನರಲ್ಲಿ ದ್ವೇಷ, ಕೋಮುಭಾವನೆಗಳನ್ನು ಭಿತ್ತಿ ಒಡೆದು ಆಳುವ ನೀತಿಯನ್ನು ಬಿಜೆಪಿ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಕ್ರೊಶ ವ್ಯಕ್ತಪಡಿಸಿದ್ದಾರೆ.

ಸಿಂಗಾಪುರ ಪ್ರವಾಸದಲ್ಲಿರುವ ಅವರು, ಅಲ್ಲಿನ ಸ್ಥಳೀಯ ಶಾಲೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಕೈಗೊಂಡು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ವಿಭಜಿಸಿ ಚುನಾವಣೆಗಳನ್ನು ಗೆಲ್ಲುತ್ತಿವೆ. ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ನೀತಿಯ ಬಗ್ಗೆ ಖಂಡಿಸಿದರು. ಅಲ್ಲಿನ ಜನರನ್ನು ಮತ್ತಷ್ಟು ಇಕ್ಕಟ್ಟಿಗೆ ಸಲುಕಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ನನ್ನ ದೇಶದ ಬಗ್ಗೆ ಹೇಳಬೇಕೆಂದರೆ ನನಗೆ ಖಂಡಿತ ಹೆಮ್ಮೆಯಿನಿಸುತ್ತದೆ. ಇದು ವಿವಿಧತೆಯಲ್ಲಿ ಏಕತೆಯಿರುವ ನಾಡು. ಭಾರತದ ಜನರಿಗೆ ತಾವು ಬಯಸುವ ಯಾವುದನ್ನಾದರೂ ಹೇಳಬಹುದೆಂಬ ಕಲ್ಪನೆಯಿದೆ. ಏನನ್ನು ಬೇಕಾದರೂ ಮಾಡುವ ಛಲವಿದೆ. ಸವಾಲುಗಳನ್ನು ಕೂಡ ಎದುರಿಸಿ ಅವರು ನಿಲ್ಲುತ್ತಾರೆ'ಎಂದು ಹೇಳಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!