ರಾಮೇಶ್ವರಂ- ಅಯೋಧ್ಯೆ ಸಂಪರ್ಕ ಕಲ್ಪಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್'ಗೆ ಮೋದಿ ಚಾಲನೆ

Published : Jul 27, 2017, 05:01 PM ISTUpdated : Apr 11, 2018, 12:59 PM IST
ರಾಮೇಶ್ವರಂ- ಅಯೋಧ್ಯೆ ಸಂಪರ್ಕ ಕಲ್ಪಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್'ಗೆ ಮೋದಿ ಚಾಲನೆ

ಸಾರಾಂಶ

ಮೇಶ್ವರಂ ಹಾಗೂ ಅಯೋಧ್ಯೆ ನಡುವೆ ಸಂಪರ್ಕವೇರ್ಪಡಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ವಾರಕೊಮ್ಮೆ ರಾಮೇಶ್ವರಂನಿಂದ ಹೊರಟು ಅಯೋಧ್ಯೆ ಮೂಲಕ ರಾಮೇಶ್ವರಂಗೆ ಮರಳುವ ಈ ರೈಲು ರಾಮನಿಗೆ ಸಂಬಂಧಪಟ್ಟ 2 ಸ್ಥಳಗಳನ್ನು ಜೋಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ರಾಮೇಶ್ವರಂ: ರಾಮೇಶ್ವರಂ ಹಾಗೂ ಅಯೋಧ್ಯೆ ನಡುವೆ ಸಂಪರ್ಕವೇರ್ಪಡಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.

ವಾರಕೊಮ್ಮೆ ರಾಮೇಶ್ವರಂನಿಂದ ಹೊರಟು ಅಯೋಧ್ಯೆ ಮೂಲಕ ರಾಮೇಶ್ವರಂಗೆ ಮರಳುವ ಈ ರೈಲು ರಾಮನಿಗೆ ಸಂಬಂಧಪಟ್ಟ 2 ಸ್ಥಳಗಳನ್ನು ಜೋಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ರಾಮೇಶ್ವರಂನಿಂದ 15 ಕಿ.ಮೀ ದೂರದ ಮಂಡಪಂದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಚಾಲನೆ ನೀಡಿದ ಮೋದಿ, ರಾಮೇಶ್ವರಂ ರಾಮನೊಂದಿಗೆ ಸಂಬಂಧಹೊಂದಿದೆ.  ಈ ರೈಲು ರಾಮನ ಜನ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈ ರೈಲು ಜೈವಿಕ ಶೌಚಲಯದ ವ್ಯವಸ್ಥೆಯನ್ನು ಹೊಂದಿದ್ದು ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಉದ್ದೇಶವನ್ನು ಕೂಡಾ ಈಡೇರಿಸುತ್ತದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ