ಎಸ್.ಎಂ.ಕೃಷ್ಣ ರಾಜೀನಾಮೆಗೆ ಕಾರಣವಾದ 8 ಸಂಗತಿಗಳಾವುವು?

Published : Jan 28, 2017, 02:06 PM ISTUpdated : Apr 11, 2018, 12:55 PM IST
ಎಸ್.ಎಂ.ಕೃಷ್ಣ ರಾಜೀನಾಮೆಗೆ ಕಾರಣವಾದ 8 ಸಂಗತಿಗಳಾವುವು?

ಸಾರಾಂಶ

ಖಾಸಾ ಶಿಷ್ಯರೆಂದೇ ಪರಿಗಣಿಸಲಾಗಿದ್ದ ಡಿಕೆ ಶಿವಕುಮಾರ್ ಅವರೇ ಕೈಕೊಟ್ಟಿದ್ದು ಎಸ್ಸೆಮ್ ಕೃಷ್ಣ ಅವರಿಗೆ ಬೇಸರ ತಂದಿತ್ತು.

ಬೆಂಗಳೂರು(ಜ. 28): ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಎಸ್ಸೆಮ್ ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ರಾಜಕಾರಣವನ್ನು ಗಮನಿಸುತ್ತಾ ಬಂದವರಿಗೆ ಕೃಷ್ಣ ನಿರ್ಧಾರ ಅಷ್ಟೇನೂ ಅನಿರೀಕ್ಷಿತವೆನಿಸಿಲ್ಲ. ಕೃಷ್ಣ ರಾಜೀನಾಮೆಗೆ ಕಾರಣವಾದ ಸಂಗತಿಗಳ ಒಂದು ಪಟ್ಟಿ ಇಲ್ಲಿದೆ.

1) ಅಕ್ಟೋಬರ್ 22, 2012ರಲ್ಲಿ ಎಸ್ಸೆಮ್ ಕೃಷ್ಣ ಅವರನ್ನು ದಿಢೀರನೇ ವಿದೇಶಾಂಗ ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಲಾಗಿತ್ತು. ಇದು ಹಿರಿಯ ರಾಜಕಾರಣಿಗೆ ಶಾಕ್ ತಂದಿತ್ತು.

2) 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್ಸೆಮ್ ಕೃಷ್ಣರನ್ನು ನಾಮಕಾವಸ್ತೆಯ ಮಟ್ಟಕ್ಕೆ ತಂದುಬಿಡಲಾಗಿತ್ತು. ಅವರ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಲಾಗಿತ್ತು.

3) ಸಂಪುಟ ರಚನೆಯಲ್ಲೂ ಎಸ್ಸೆಮ್ ಕೃಷ್ಣ ಬೆಂಬಲಿಗರನ್ನು ಕಡೆಗಣಿಸಲಾಗಿತ್ತು

4) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎಸ್ಸೆಮ್ ಕೃಷ್ಣರನ್ನು ಮೂಲೆಗುಂಪು ಮಾಡಲಾಗಿತ್ತು.

5) ಶ್ರೀನಿವಾಸ ಪ್ರಸಾದ್ ರಾಜೀನಾಮೆಯು ಎಸ್ಸೆಮ್ ಕೃಷ್ಣಗೆ ಅಸಮಾಧಾನ ತಂದಿತ್ತು

6) ಕರ್ನಾಟಕದಿಂದ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಎಸ್ಸೆಮ್ ಕೃಷ್ಣಗೆ ಯಾರೂ ಬೆಂಬಲ ನೀಡಲಿಲ್ಲ.

7) ಖಾಸಾ ಶಿಷ್ಯರೆಂದೇ ಪರಿಗಣಿಸಲಾಗಿದ್ದ ಡಿಕೆ ಶಿವಕುಮಾರ್ ಅವರೇ ಕೈಕೊಟ್ಟಿದ್ದು ಎಸ್ಸೆಮ್ ಕೃಷ್ಣ ಅವರಿಗೆ ಬೇಸರ ತಂದಿತ್ತು.

8) ಇತ್ತೀಚೆಗೆ ಎಸ್ಸೆಮ್ ಕೃಷ್ಣ ಅವರು ಪ್ರಧಾನಿ ಮೋದಿ ಪರವಾಗಿ ಹೇಳಿಕೆ ನೀಡಿದ್ದು ಕಾಂಗ್ರೆಸ್ ಕೈಕಮಾಂಡ್'ಗೆ ಕೆಂಗಣ್ಣು ತಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ್ಯೂಸ್‌ಗೆ ಡ್ರಗ್‌ ಮಿಕ್ಸ್‌ ಮಾಡಿ ಹಲವು ಅಪ್ರಾಪ್ತರ ಮೇಲೆ ಮಧ್ಯವಯಸ್ಕನಿಂದ ರೇ*ಪ್: ವೀಡಿಯೋ ಮಾಡಿ ಬ್ಲಾಕ್‌ಮೇಲ್
ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' BJP MLA ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ