
ತಿರುವನಂತಪುರಂ : ಭಕ್ತರ ದರ್ಶನಕ್ಕೆ ಅಯ್ಯಪ್ಪ ದೇಗುಲದ ಬಾಗಿಲು ತೆರೆದ ವೇಳೆ ಇಲ್ಲಿನ ನೀಲಕ್ಕಲ್ ಪ್ರದೇಶದ ಭದ್ರತಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಅವರು ಶಬರಿಮಲೆಯಲ್ಲಿನ ಶಾಂತಿಯನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಲ್ಲಿನ ಯಾವುದೇ ರೀತಿಯ ಭದ್ರತಾ ಸಮಸ್ಯೆಯನ್ನು ನಿವಾರಿಸಲೂ ಕೂಡ ಪೊಲೀಸರು ಸದಾ ಸಿದ್ಧರಿದ್ದಾರೆ . ಯಾವುದೇ ರೀತಿಯ ಸಮಸ್ಯೆ ಇಲ್ಲದೆಯೇ ಯಾವುದೇ ಭಕ್ತರೂ ಕೂಡ ಶಬರಿಮಲೆ ದೇಗುಲಕ್ಕೆ ತೆರಳಬಹುದು ಎಂದು ಹೇಳಿದ್ದಾರೆ.
ಈಗಾಗಲೇ 50 ಸಾವಿರಕ್ಕೂ ಕೂಡ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ತಲುಪಿದ್ದಾರೆ. ಇದೊಂದು ಉತ್ತಮ ಸೂಚನೆಯಾಗಿದ್ದು, ನವೆಂಬರ್ 30ರ ವರೆಗೂ ತಾವಿಲ್ಲಿ ಕಾರ್ಯನಿರ್ವಹಿಸಲಿದ್ದು ಈ ಕಾರ್ಯ ಸೂಕ್ತವಾಗಿ ಮುಂದುವರಿಯಲಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಶಬರಿಮಲೆ ದೇಗುಲಕ್ಕೆ ತೆರಳುವ ಬಗ್ಗೆ ಯಾವುದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದಲ್ಲಿಯೂ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ನಾನೂ ಕೂಡ ಅಯ್ಯಪ್ಪ ಭಕ್ತನಾಗಿದ್ದು, ಚಿಕ್ಕಂದಿನಿಂದಲೇ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುತ್ತಿದ್ದೇನೆ. ನಾನೋರ್ವ ಹಿಂದೂ ಆಗಿದ್ದು, ನನ್ನ ಕರ್ತವ್ಯಕ್ಕೆ ಎಂದಿಗೂ ನನ್ನ ಜಾತಿ, ಧರ್ಮ ಅಡ್ಡಬರುವುದಿಲ್ಲ, ನಾನು ಬಡವನಾಗಿಯೇ ಇಲ್ಲಿಯವರೆಗೆ ಬಂದಿದ್ದು ಈಗಲೂ ಕೂಡ ಬಡತನದಲ್ಲಿಯೇ ಇದ್ದೇನೆ ಎಂದು ಪ್ರಸಿದ್ಧ ಮಲಯಾಳಂ ಪತ್ರಿಕೆಯೊಂದನ್ನು ಸಂದರ್ಶನ ನೀಡಿ ಯತೀಶ್ ಚಂದ್ರ ಈ ವಿಚಾರ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.