
ಹಾವೇರಿ (ಅ.15): ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ನಿನ್ನೆ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಕೆಲಸ ಮಾಡದ ಗೊಡ್ಡೆಮ್ಮೆ ಎಂದು ವಿನಯ್ ಕುಲಕರ್ಣಿ ಹೇಳಿದ್ದರು. ನನಗೂ ಹೊಲಸು ಭಾಷೆ ಮಾತಾಡೋಕೆ ಬರುತ್ತೆ . ಆದರೆ ಅವರಂತೆ ಕೀಳು ಸಂಸ್ಕೃತಿ ನಮ್ಮದಲ್ಲ. ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮುಂದೆ ನಿಂತು ಮಾತಾಡಲಿ ನೋಡೋಣ. ಅವರ ಬಳಿ ಇವರ ಆಟ ನಡಿಯೊಲ್ಲ ಅದಕ್ಕೆ ದಾರಿ ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಪ್ರಹ್ಲಾದ್ ಜೋಷಿ ಟಾಂಗ್ ನೀಡಿದ್ದಾರೆ.
ಬಾಂಡ್ಲಿಯಲ್ಲಿಯಲ್ಲಿರುವ ಜಿಲೆಬಿ ಇದ್ದ ಹಾಗೆ ಇದಾರೆ. ಚುನಾವಣೆಯಲ್ಲಿ ಯಾರು ಗೊಡ್ಡೆಮ್ಮೆ ಅನ್ನೋದು ತಿಳಿಯುತ್ತೆ ಎಂದು ನೂರು ಕೋಟಿ ವೆಚ್ಚದ ಅಂಡರ್ ಪಾಸ್ ಬ್ರೀಡ್ಜ್ ಭೂಮಿ ಪೂಜೆ ವೇಳೆ ಹಾವೇರಿ ಜಿಲ್ಲೆ ಶಿಗ್ಗಾವಿ ನಗರದಲ್ಲಿ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.