
ಚಂಡೀಗಢ (ಜ.31): ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.
ಇದರನ್ವಯ, ಇನ್ನು ಮುಂದೆ ನಿಖಾ (ವಿವಾಹ) ಔತಣದಲ್ಲಿ ಗೋಮಾಂಸದ ಅಡುಗೆ ಇರುವುದಿಲ್ಲ ಎಂದು ವಧು-ವರನ ಕಡೆಯವರು ಖಚಿತಪಡಿಸಿದ ಮೇಲಷ್ಟೇ ಮೌಲ್ವಿಗಳು ನಿಖಾ ಮಾಡಿಸುತ್ತಾರಂತೆ. ನುಹ್, ರಿವಾರಿ, ಪಲ್ವಾಲ್, ಫರೀದಾದಾಬಾದ್ ಪ್ರದೇಶದ ಮೌಲ್ವಿಗಳು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.