
ಶ್ರೀನಗರ[ಏ.01]: ಬಾಲಾಕೋಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲೇ ಶ್ರೀನಗರದ ಬಳಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಪತನಗೊಂಡಿದ್ದ ಘಟನೆಗೆ ಹೊಸ ತಿರುವು ಲಭಿಸಿದೆ. ಶತ್ರುದೇಶದ ಕಾಪ್ಟರ್ ಅದಾಗಿರಬಹುದು ಎಂದು ಭಾವಿಸಿ ಭಾರತೀಯ ವಾಯುರಕ್ಷಣಾ ವ್ಯವಸ್ಥೆಯೇ ಅದನ್ನು ಹೊಡೆದುರುಳಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಆಯಾಮದಲ್ಲಿ ತನಿಖೆ ಕೂಡ ನಡೆಯುತ್ತಿದೆ.
ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಹೆಲಿಕಾಪ್ಟರ್
ವಿಮಾನ ಹಾಗೂ ಹೆಲಿಕಾಪ್ಟರ್ಗಳಲ್ಲಿ ‘ಐಡೆಂಟಿಫಿಕೇಷನ್ ಫ್ರೆಂಡ್ ಆರ್ ಫೋ’ ಎಂಬ ಸ್ವಿಚ್ ಇರುತ್ತದೆ. ಈ ಸ್ವಿಚ್ ಆನ್ ಆಗಿದ್ದರೆ, ಹಾರಾಡುತ್ತಿರುವ ವಿಮಾನ/ಕಾಪ್ಟರ್ ತನ್ನ ದೇಶದ್ದೋ ಅಥವಾ ಶತ್ರುದೇಶದ್ದೋ ಎಂಬುದು ರಾಡಾರ್ಗೆ ಗೊತ್ತಾಗುತ್ತದೆ. ಆದರೆ ಅಂದು ಎಂಐ-17 ಹೆಲಿಕಾಪ್ಟರ್ ಪೈಲಟ್ ಆ ಸ್ವಿಚ್ ಆನ್ ಮಾಡಲು ಮರೆತಿದ್ದರಿಂದ, ಪಾಕಿಸ್ತಾನದ ಕಾಪ್ಟರ್ ಇರಬಹುದು ಎಂದು ಭಾವಿಸಿ ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.17ರಂದು ಈ ವಿಮಾನ ಪತನಗೊಂಡು ಅದರಲ್ಲಿದ್ದ ಎಲ್ಲ ಆರೂ ಮಂದಿ ಸಾವನ್ನಪ್ಪಿದ್ದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ವರದಿ ಬರುವ ಮುನ್ನವೇ ಪ್ರತಿಕ್ರಿಯೆ ನೀಡುವುದು ಅಪಕ್ವವಾಗುತ್ತದೆ ಎಂದು ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.