ತಾವು ವಿಷ್ಣುವಿನ 10ನೇ ಅವತಾರ ಎಂದು ಕೆಲಸಕ್ಕೆ ಹಾಜರಾಗದ ಸರ್ಕಾರಿ ಅಧಿಕಾರಿ

Published : May 19, 2018, 12:22 PM IST
ತಾವು ವಿಷ್ಣುವಿನ 10ನೇ ಅವತಾರ ಎಂದು ಕೆಲಸಕ್ಕೆ ಹಾಜರಾಗದ ಸರ್ಕಾರಿ  ಅಧಿಕಾರಿ

ಸಾರಾಂಶ

ಗುಜರಾತ್ ಸರ್ಕಾರಿ ಅಧಿಕಾರಿಯೋರ್ವರು ತಾವು ವಿಷ್ಣುವಿನ 10ನೇ ಅವತಾರವಾದ ಕಲ್ಕಿ ಎಂದು ಹೇಳಿಕೊಂಡಿದ್ದು, ಜಗದೋದ್ದಾರಕ್ಕಾಗಿ ಪ್ರಾಯಶ್ಚಿತ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದ್ದರಿಂದ ತಾವು ಕೆಸಲಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.   

ಅಹಮದಾಬಾದ್ : ಗುಜರಾತ್ ಸರ್ಕಾರಿ ಅಧಿಕಾರಿಯೋರ್ವರು ತಾವು ವಿಷ್ಣುವಿನ 10ನೇ ಅವತಾರವಾದ ಕಲ್ಕಿ ಎಂದು ಹೇಳಿಕೊಂಡಿದ್ದು, ಜಗದೋದ್ದಾರಕ್ಕಾಗಿ ಪ್ರಾಯಶ್ಚಿತ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದ್ದರಿಂದ ತಾವು ಕೆಸಲಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.   

 ರಮೇಶ್ ಚಂದ್ರ ಫೆಫರ್ ಎನ್ನುವ ಸೂಪರಿಂಟೆಂಡ್ ಇಂಜಿನಿಯರ್ ಆಗಿರುವ ಅವರು ತಮ್ಮ ಪ್ರಾಯಶ್ಚಿತದಿಂದ ಮಾತ್ರವೇ ದೇಶಕ್ಕೆ ಒಳಿತಾಗಲು ಸಾಧ್ಯ. ಉತ್ತಮ ಮಳೆ ಬೆಳೆ ಆಗಬೇಕೆಂದರೆ ತಾವು ಹೀಗೆ ಮಾಡಲೇಬೇಕು ಎಂದು ಹೇಳಿದ್ದಾರೆ. 

ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ಗೆ ಉತ್ತರಿಸಿದ ಅವರು ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.  ತಾವು ದೇವರ ಅವತಾರ ಎಂದು ಹೇಳಿರುವ ಅವರ ಹೇಳಿಕೆ ಇದೀಗ ಸಾಮಾಜಿಕ ಫುಲ್ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. 

ಅಲ್ಲದೇ ಮುಂದಿನ ದಿನಗಳಲ್ಲಿ ತಾವು ವಿಷ್ಣುವಿನ ಅವತಾರ ಎನ್ನುವುದನ್ನು  ಸಾಬೀತುಪಡಸುತ್ತೇವೆ ಎಂದು ಹೇಳಿದ್ದಾರೆ. 2010ನೇ ಇಸವಿಯಲ್ಲಿ ತಾವು ಕಚೇರಿಯಲ್ಲಿ ಇದ್ದ ವೇಳೆ ತಮಗೆ ಒಂದು ರೀತಿಯ ವಿಚಿತ್ರ ಅನುಭವ ಉಂಟಾಯಿತು. ಅದಾದ ಬಳಿಕ ನನಗೆ ನಾನು ವಿಷ್ಣುವಿನ ಅವತಾರ ಎನ್ನುವುದು ಅರಿವಾಯಿತು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ