
ಹೈದರಾಬಾದ್: ಹೈದರಾಬಾದಿನ ಟೆಕಿ ಮಹಿಳೆಯೊಬ್ಬರು ಸಿರೆಯುಟ್ಟುಕೊಂಡೇ 42 ಕಿ.ಮೀ ದೂರ ಓಡಿ, ಸೊಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.
ಸಾಫ್ಟ್’ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಐಟಿ ಮ್ಯಾನೇಜರ್ ಆಗಿರುವ ಜಯಂತಿ ಸಂಪತ್ ಕುಮಾರ್ ಸೀರೆಯುಟ್ಟುಕೊಂಡೇ 42 ಕಿ.ಮಿ ಮ್ಯಾರಥನ್ ಓಟವನ್ನು ಕೇವಲ 5 ಗಂಟೆಗಳಲ್ಲಿ ಮುಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಏರ್’ಟೆಲ್ ಮ್ಯಾರಥಾನ್ ಓಟದಲ್ಲಿ ಜಯಂತಿ ಸಂಪತ್ ಕುಮಾರ್ ಸೀರೆ ಧರಿಸಿ ಓಡಲು ಒಂದು ಕಾರಣ ಇದೆ. ಅವರು ಧರಿಸಿದ್ದ ಸೀರೆ ಅಂತಿಂತಹದ್ದಲ್ಲ, ಅದು ಕೈಮಗ್ಗದ ಸೀರೆ! ಕೈಮಗ್ಗದ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಯಂತಿ ಈ ಉಪಾಯ ಹೂಡಿದ್ದಾರೆ.
ಜಗತ್ತಿನಲ್ಲಿ ಅತೀ ಹೆಚ್ಚು ಕೈಮಗ್ಗಗಳನ್ನು ಹೊಂದಿರುವ ದೇಶ ಭಾರತ, ಇದು ಹೆಮ್ಮೆಯ ವಿಷಯ. ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡುವ ಕೈಮಗ್ಗಗಳು ದುರಾದೃಷ್ಟವಶಾತ್ ಇಂದು ಕಣ್ಮರೆಯಾಗುತ್ತಿವೆ, ನಾವದನ್ನು ಉಳಿಸಬೇಕೆಂದು ಜಯಂತಿ ಅಭಿಪ್ರಾಯಪಡುತ್ತಾರೆ.
ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ಜಯಂತಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಅದೇ ಅಲ್ಲದೇ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಕೂಡಾ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ.
(ಫೋಟೋ ಕೃಪೆ: ಜಯಂತಿ ಸಂಪತ್ ಕುಮಾರ್ ಫೇಸ್ಬುಕ್ ವಾಲ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.