ಹೆಂಡತಿ ಎಂದರೆ ನಂಗೆ ಭಯ; ಕೋರ್ಟ್'ನಲ್ಲಿ ಅಳಲು ತೋಡಿಕೊಂಡ ಪತಿ ಮಹಾಶಯ

Published : Jan 29, 2018, 03:06 PM ISTUpdated : Apr 11, 2018, 12:42 PM IST
ಹೆಂಡತಿ ಎಂದರೆ ನಂಗೆ ಭಯ; ಕೋರ್ಟ್'ನಲ್ಲಿ ಅಳಲು ತೋಡಿಕೊಂಡ ಪತಿ ಮಹಾಶಯ

ಸಾರಾಂಶ

"ನನಗೆ ನನ್ನ ಹೆಂಡತಿ ಎಂದರೆ ಭಯ ಸ್ವಾಮಿ.." ಹೀಗಂತ  ಪತಿ ಮಹಾಶಯನೊಬ್ಬ ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೋಡಿಕೊಂಡಿರುವ ಮಜವಾದ ಪ್ರಸಂಗ ನಡೆದಿದೆ.

ಬೆಂಗಳೂರು (ಜ.29): "ನನಗೆ ನನ್ನ ಹೆಂಡತಿ ಎಂದರೆ ಭಯ ಸ್ವಾಮಿ.." ಹೀಗಂತ  ಪತಿ ಮಹಾಶಯನೊಬ್ಬ ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೋಡಿಕೊಂಡಿರುವ ಮಜವಾದ ಪ್ರಸಂಗ ನಡೆದಿದೆ.

ನನ್ನ ಹೆಂಡತಿ ಅಂದರೆ ನನಗೆ ಭಯ.  ನನಗೆ ಡೈವೊರ್ಸ್ ಕೊಡಬೇಕೆಂದು ಗಂಡ ಹೈಕೋರ್ಟ್ ಏಕಸದಸ್ಯ ಪೀಠ ಬಳಿ ಮನವಿ ಮಾಡಿದ್ದಾನೆ.  

ನೀವಿಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಎಂದು ಹೈಕೋರ್ಟ್ ಸೂಚಿಸಿದಾಗ ನಾನು ಅವಳ ಜತೆಗೆ ಹೋಗಲ್ಲ ಎಂದು ಆತ ಹೇಳಿದ್ದಾನೆ.  ಕಬ್ಬನ್ ಪಾರ್ಕ್'ಗೆ ಹೋಗಿ ಮಾತನಾಡಿ ಎಂದು  ಕೋರ್ಟ್ ಸೂಚಿಸಿದಾಗ ಭಯದಿಂದ ಈತ ಒಲ್ಲೆ ಎಂದಿದ್ದಾನೆ.

ಬೆಂಗಳೂರು ವಾಸಿಗಳಾಗಿರುವ ಗಂಡ-ಹೆಂಡತಿ ವಿಚಿತ್ರ ಪ್ರಸಂಗಕ್ಕೆ ಹೈಕೋರ್ಟ್ ಸಾಕ್ಷಿಯಾಗಿದೆ. ನ್ಯಾಯಮೂರ್ತಿ K.N.ಫಣೀಂದ್ರ ಅವರು ಅರ್ಜಿ ವಿಚಾರಣೆ ನಡೆಸಿದ್ದಾರೆ.

ನನಗೆ ನನ್ನ ಹೆಂಡತಿ ಅಂದರೆ ಭಯ ಆಗುತ್ತೆ .ನಾನು ಇಲ್ಲಿಯೇ ಮಾತನಾಡುತ್ತೇನೆ ಎಂದು ಭಯ ಬಿದ್ದ ಗಂಡನ ಹೆದರಿಕೆ ಕಂಡು ನ್ಯಾಯಾಧೀಶರಿಗೇ ಆಶ್ಚರ್ಯವಾಗಿದೆ. ಕೋರ್ಟ್ ಕಾರಿಡಾರ್'ನಲ್ಲೇ ಮಾತನಾಡಲು ಜಸ್ಟೀಸ್ ಸೂಚಿಸಿದ್ದಾರೆ.

ಪೊಲೀಸ್ ಕಾವಲಿನಲ್ಲಿಯೇ ಕೋರ್ಟ್ ಕಾರಿಡಾರ್'ನಲ್ಲೇ ಮಾತನಾಡಲು ನ್ಯಾಯಾಧೀಶರು ಸೂಚಿಸಿದ್ದು ಪರಸ್ಪರ ಮಾತನಾಡಿಕೊಂಡು ನಿರ್ಧಾರ ತಿಳಿಸಲು ಹೇಳಿದ್ದಾರೆ.  4 ಗಂಟೆಗೆ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌