ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದ್ದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಪಾಪಿ ಪತಿ

Published : Jan 23, 2018, 01:29 PM ISTUpdated : Apr 11, 2018, 12:39 PM IST
ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದ್ದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಪಾಪಿ ಪತಿ

ಸಾರಾಂಶ

ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಬೆಂಗಳೂರು (ಜ.23): ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಪಾಪಿ ಪತಿ ಚಂದ್ರಶೇಖರ್ ಹೆಂಡತಿ ಮೇಲೆ ಹಲ್ಲೆ ಮಾಡಿ ಹೆಂಡತಿ ಕೈ ಕಾಲು ಮುರಿದಿದ್ದಾನೆ.  ಚಂದ್ರಶೇಖರ್ ಬಿಂದುಶ್ರೀಯನ್ನು  8 ತಿಂಗಳ ಹಿಂದೆ ಲವ್ ಮಾಡಿ ಮದುವೆ ಆಗಿದ್ದ.  ಮದುವೆಯಾದ 2 ದಿನದಲ್ಲಿ ಚಂದ್ರಶೇಖರ್ ನಿಜ ರೂಪ ಗೊತ್ತಾಗಿತ್ತು.  ಚಂದ್ರಶೇಖರ್ ನಾಲ್ಕು ವರ್ಷದ ಹಿಂದೆ ಬಿಂದುಶ್ರಿ ಅಕ್ಕನನ್ನು ನೋಡುವುದಕ್ಕೆ ಹೋಗಿದ್ದ. ಅವತ್ತು ಅಕ್ಕ,  ನೀನು ಬೇಡ ಅಂತಾ ಚಂದ್ರಶೇಖರ್'ನನ್ನು ರಿಜೆಕ್ಟ್ ಮಾಡಿದ್ದಳು.  ಆಗ ಬಿಂದುಶ್ರಿಗೆ ಇನ್ನು 14 ವರ್ಷವಾಗಿತ್ತು. ಇದನ್ನೇ ದ್ವೇಷವಾಗಿ ಮನಸ್ಸಿನಲ್ಲಿಟ್ಟುಕೊಂಡ ದುಷ್ಟ ಚಂದ್ರಶೇಖರ್ ನಾಲ್ಕು ವರ್ಷ ಕಾದು ಬಿಂದುಶ್ರೀಗೆ 18 ವರ್ಷ ಆಗುವವರೆಗೂ ಕಾದಿದ್ದ.  ಬಳಿಕ ಲವ್ ಮಾಡಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ.  ಆದರೀಗ ನಿನ್ನಕ್ಕ ಅವತ್ತು ನನ್ನನ್ನು ರಿಜೆಕ್ಟ್ ಮಾಡಿದ್ಲು ಅಂತಾ ದಿನಾ ಹೆಂಡತಿಗೆ  ಹೊಡೆಯುತ್ತಿದ್ದಾನೆ.  ಹೆಂಡತಿ ಕುತ್ತಿಗೆ ಮೇಲೆ ಕಾಲಿಟ್ಟು ಕೈ ಮುರಿದಿದ್ದಾನೆ. ಗಾಯಗೊಂಡಿರುವ ಬಿಂದುಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ನಿಷೇಧಿಸದಿದ್ದರೆ ಸಿಎಂ ಸಿದ್ದರಾಮಯ್ಯ ನನ್ನ ಪಾಲಿಗೆ ರಾಕ್ಷಸ: ಶಾಸಕ ಶರಣು ಸಲಗರ್!
ಯಾರೂ ನನಗೆ ಸಹಾಯ ಮಾಡುತ್ತಿಲ್ಲ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೊರೆ ಹೋದ ಮುಂಬೈ ಡಾನ್ ಹಾಜಿ ಮಸ್ತಾನ್ ಪುತ್ರಿ!