
ಬೆಂಗಳೂರು(ಮೇ.02): ಪೊರ್ಕಿ ಹುಚ್ಚ ವೆಂಕಟ್ ಸಿನಿಮಾ ಬಗ್ಗೆ ಮಾಧ್ಯಮವೊಂದು ಸರಿಯಾಗಿ ವಿಮರ್ಶೆ ಮಾಡಿಲ್ಲ ಅಂತಾ ಆರೋಪಿಸಿ ಸುದ್ದಿಗೋಷ್ಠಿ ವೇಳೆಯೇ ಪತ್ರಕರ್ತರ ವಿರುದ್ಧ ಹುಚ್ಚ ವೆಂಕಟ್ ಹರಿಹಾಯ್ದಿದ್ದಾರೆ. ಮುದ್ರಣ ಮಾಧ್ಯಮದವರು ನನ್ನನ್ನ ನಿಂದಿಸಿ ವಿಮರ್ಶೆ ಮಾಡಿದ್ದಾರೆ ಅಂತಾ ಹುಚ್ಚ ವೆಂಕಟ್ ಸಿಡಿಮಿಡಿಗೊಂಡಿದ್ದಾರೆ. ಹುಚ್ಚವೆಂಕಟ್ ಹೇಳಿಕೆ ಬಗ್ಗೆ ಬರೆಯೋ ಅಧಿಕಾರ ನಿಮಗಿದೆ. ಆದರೆ ವಿಮರ್ಶೆ ಮಾಡುವ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದರೆ ಸಿನಿಮಾ ನೋಡಲು ಬರಬೇಡಿ ಅಂತಾ ಹುಚ್ಚವೆಂಕಟ್ ಮುದ್ರಣ ಮಾಧ್ಯಮವೊಂದರ ವಿರುದ್ಧ ಸುದ್ದಿಗೋಷ್ಟಿಯಲ್ಲೇ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳು ತೆಲುಗು ಸಿನಿಮಾ ನೋಡ್ತಾರೆ . ಕನ್ನಡ ಚಿತ್ರ ನೋಡಿ ಅಂತಾ ಹೇಳಿದ ಹುಚ್ಚ ವೆಂಕಟ್, ಕೊನೆಗೆ ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ ಅಂತಾ ಹೇಳಿ ಹೊರ ನಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.