ಗೆಲುವಿಗಾಗಿ ರಣತಂತ್ರ ರೂಪಿಸಿರುವ ಬಿಜೆಪಿ ಚಾಣಾಕ್ಯ

By Suvarna Web DeskFirst Published Apr 5, 2018, 12:28 PM IST
Highlights

ಹೊಸ ಮುಖಗಳಿಗೆ ಮಣೆ ಹಾಕಲು ಅಮಿತ್ ಶಾ ಸಿದ್ಧರಾಗಿದ್ದು, ಸುಮಾರು 70 ರಿಂದ 80 ಜನ ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ.

ನವದೆಹಲಿ : ಹೊಸ ಮುಖಗಳಿಗೆ ಮಣೆ ಹಾಕಲು ಅಮಿತ್ ಶಾ ಸಿದ್ಧರಾಗಿದ್ದು, ಸುಮಾರು 70 ರಿಂದ 80 ಜನ ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ.

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಈ ನಿಟ್ಟಿನಲ್ಲಿ ರಣತಂತ್ರ ರೂಪಿಸಿದ್ದಾರೆ. 224 ಕ್ಷೇತ್ರಗಳ ಪೈಕಿ  80 ಕ್ಷೇತ್ರಗಳಲ್ಲಿ  ಹೊಸಬರಿಗೆ ಟಿಕೆಟ್ ಸಿಗುತ್ತಿದೆ. ಮಿಷನ್ 150ಕ್ಕಾಗಿ ಹೊಸ ಮುಖಗಳನ್ನು ಗುರುತಿಸಿದ್ದಾರೆ.

ಇನ್ನು ಏಪ್ರಿಲ್ 8ರವರೆಗೆ ಬಿಜೆಪಿ ಸಭೆ ನಡೆಸುತ್ತಿದೆ. ಏಪ್ರಿಲ್ 7ರಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಏಪ್ರಿಲ್ 7ನೇ ತಾರೀಕಿನವರೆಗೂ ಕೂಡ ಬಿಜೆಪಿ ಮುಖಂಡರು ಸಾಲು ಸಾಲು ಸಭೆ ನಡೆಸಲಿದ್ದಾರೆ. ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲೇ ಸಭೆಗಳು ನಡೆಯಲಿದೆ.  

click me!