
ಹೂಸ್ಟನ್[ಸೆ.22]: ಹೂಸ್ಟನ್ನ ಎನ್ಆರ್ಜಿ ಫುಟ್ಬಾಲ್ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಭಾರತದ ತ್ರಿವರ್ಣ ಧ್ವಜಗಳು.. ಮೋದಿ ಮೋದಿ ಘೋಷಣೆ..ಜನಗಣ ಮನ .. ಇದಕ್ಕೆಲ್ಲ ಕಾರಣ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ನಲ್ಲಿ ‘ಹೌಡಿ-ಮೋದಿ’ ಸಮಾವೇಶ.
ಮೊದಲು ಪೀಠಿಕೆಯ ರೀತಿ ಮಾತನಾಡಿದ ಮೋದಿ ಮತ್ತು ಟ್ರಂಪ್ ಒಬ್ಬರನ್ನೊಬ್ಬರು ಪರಿಚಯ ಮಾಡಿಸಿ ಹಾಡಿ ಹೊಗಳಿದರು. ಹಾಗಾದರೆ ಮೋದಿ ಭಾಷಣದ ಹೈಲೈಟ್ಸ್ ಏನು?
* ಭಾರತ ಸವಾಲುಗಳಿಂದ ಓಡುತ್ತಿಲ್ಲ, ಸವಾಲುಗಳನ್ನ ಎದುರಿಸುತ್ತಿದ್ದೇವೆ. ಭಾರತ 5 ಟ್ರಿಲಿಯನ್ ಆರ್ಥಿಕತೆ ಹೊಂದುವ ಗುರಿ ಹೊಂದಿದೆ. ಉದ್ಯಮಿ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ.ಸ್ನೇಹಕ್ಕೆ ಸ್ನೇಹ..ಪ್ರೀತಿಗೆ
ಪ್ರೀತಿ... ಮೋದಿ-ಟ್ರಂಪ್ ಜುಗಲ್ಬಂದಿ, ಪಾಕ್ಗೆ ಫಜೀತಿ
* ಹಲವು ಅನಿಶ್ಚಿತತೆ ನಡುವೆ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಭಾರತ ವಿದೇಶಿ ಬಂಡಾವಾಳ ಹೂಡಿಕೆದಾರರ ಸ್ವರ್ಗವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಲವು ನೀತಿ ಸಡಿಲಿಕೆ ಮಾಡಲಾಗಿದೆ.
* ಭಾರತದ 2019ರ ಲೋಕಸಭೆ ಚುನಾವಣೆ ದೇಶದ ಪ್ರಜಾಪ್ರಭುತ್ವದ ಹೆಗ್ಗಳಿಕೆಯನ್ನು ಪ್ರಪಂಚಕ್ಕೆ ಪರಿಚಯಿಸಿತು
* 61 ಕೋಟಿ ಜನರು ಈ ಬಾರಿ ಮತದಾನ ಮಾಡಿದರು. ಅಮೆರಿಕ ಜನಸಂಖ್ಯೆಯ ದುಪ್ಪಟ್ಟು ಜನ ಭಾರತದಲ್ಲಿ ಮತದಾನ ಮಾಡಿದರು. 8 ಕೋಟಿ ಹೊಸ ಮತದಾರರು ಈ ಬಾರಿ ಮತ ಚಲಾಯಿಸಿದರು
* ಹಿಂದೆಂದೂ ಕಾಣದ ರೀತಿ ಅತಿ ಹೆಚ್ಚು ಮಹಿಳೆಯರು ಮತ ಚಲಾಯಿಸಿದರು.. ಅಲ್ಲದೇ ಗೆದ್ದು ಬಂದರು.
* ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ, ಇದೇ ನಮ್ಮ ಶಕ್ತಿ, ಇದೇ ನಮಗೆ ಪ್ರೇರಣೆ
*ನಾವು ಎಲ್ಲಿ ಹೋಗುತ್ತೇವೆಯೋ ಅಲ್ಲಿಗೆ ಪ್ರಜಾಪ್ರಭುತ್ವದ ಸಂಸ್ಕಾರವನ್ನೂ ಜತೆಗೆ ತೆಗೆದುಕೊಂಡು ಹೋಗುತ್ತೇವೆ
*ಮೋದಿ ಒಬ್ಬನೇ ಏನೂ ಅಲ್ಲ, ನಾನು 130 ಕೋಟಿ ಜನರ ಆದೇಶ ಪಾಲಿಸುವ ಸಾಧಾರಣ ವ್ಯಕ್ತಿ
* ಭಾರತದ ಎಲ್ಲ ಪ್ರಾದೇಶಿಕ ಭಾಷೆಯಲ್ಲೂ ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದ ಮೋದಿ
ಹೊಸ ಎಫ್ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್ಮಾರ್ಟ್ ದೋಸ್ತಿಗೆ ಭೀತಿ!
* ರಾಜ್ಯಸಭೆಯಲ್ಲಿ ನಮಗೆ ಬಹುಮತ ಆದರೂ ಅನೇಕ ಶಾಸನಗಳು ಎರಡೂ ಸಭೆಗಳಲ್ಲಿ ಅಂಗೀಕಾರವಾಗಿದೆ
* ಆರ್ಟಿಕಲ್ 370 ರದ್ದು ಮಾಡಲು ಎಲ್ಲರೂ ಸಮ್ಮತಿ ಕೊಟ್ಟರು. ಇದಕ್ಕೆ ಎಲ್ಲರೂ ಎದ್ದು ನಿಂತು ಸಂಸದರಿಗೆ ಅಭಿನಂದನೆ ಸಲ್ಲಿಸಬೇಕು.
* ಆರ್ಟಿಕಲ್ 370 ರದ್ದತಿಯಿಂದ ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಅಶಾಂತಿ ಬೇಕು. ಆಂತಕವಾದವನ್ನ ಪಾಲನೆ ಪೋಷಣೆ ಮಾಡುವವರು. ಅವರು ಯಾರು ಎನ್ನುವುದು ವಿಶ್ವಕ್ಕೆ ಚೆನ್ನಾಗಿ ಗೊತ್ತಿದೆ
* ಅಮೆರಿಕ 9-11 ಹಾಗೂ ಮುಂಬೈ ದಾಳಿಕೋರರು ಎಲ್ಲಿನವರು? ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಬೇಕಿದೆ. ಟ್ರಂಪ್ ಕೂಡ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
* ದೇಶದಲ್ಲಿ 70 ವರ್ಷಗಳಿಂದ ನಮ್ಮ ಮುಂದೆ ದೊಡ್ಡ ಸವಾಲು ಇತ್ತು ಅದೆಲ್ಲವನ್ನು ಮೀರಿ ನಿಂತಿದ್ದೇವೆ.
* ಆರ್ಟಿಕಲ್ 370ಗೂ ನಾವು ಬೀಳ್ಕೊಡುಗೆ ಕೊಟ್ಟಿದ್ದೇವೆ. ಕಾಶ್ಮೀರ, ಲಡಾಕ್ ಜನರು ಸೌಲಭ್ಯ ವಂಚಿತರಾಗಿದ್ದರು. ಇದರಿಂದ ಭಯೋತ್ಪಾದನಾ ಕೃತ್ಯ ಜಾಸ್ತಿಯಾಗಿತ್ತು ಈಗ ಇತರೆ ಭಾರತೀಯರ ರೀತಿ, ಕಾಶ್ಮೀರ, ಲಡಾಕ್ ಜನರಿಗೂ ಸಕಲ ಸೌಲಭ್ಯ ಸಿಗಲಿದೆ.
"
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.