
ಬಾಗಲಕೋಟೆ (ಮಾ.24): ಪ್ರತ್ಯೇಕ ಲಿಂಗಾಯತ ಧರ್ಮ ಅಧಿಸೂಚನೆ ವಿಚಾರವಾಗಿ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಸಚಿವ ಎಂ.ಬಿ ಪಾಟೀಲ್’ಗೆ ಪರೋಕ್ಷ ವಾಗಿ ಟಾಂಗ್ ನೀಡಿದ್ದಾರೆ.
ಒಂದು ಮನೆ ಅಂದಮೇಲೆ, ಮನೆ ಹಾಳು ಮಾಡುವವರು ಇರ್ತಾರೆ. ಉದ್ದಾರ ಮಾಡುವವರು ಇರ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ವೀರಶೈವ ಮಹಾಸಭಾ ಕೈಗೊಂಡ ನಿರ್ಣಯ ಸೂಕ್ತ. ಹಿರಿಯರು ಎನಿಸಿಕೊಂಡವರು ಮನೆತನ ಮುನ್ನಡೆಸಿಕೊಂಡು ಹೋಗಬೇಕು ಎಂದಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ವೀರಶೈವ ಹಾಗೂ ಲಿಂಗಾಯತರಿಗೆ ಸಂಭಂಧವಿಲ್ಲ ಹೇಳಿಕೆಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ್ ಅದು ಅವರವರ ಇಚ್ಛೆ. ಯಾರು ಮನೆ ಹಾಳು ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ವೀರಶೈವ ಮಹಾಸಭಾದವರು ಹಾಗೂ ಈಶ್ವರ ಖಂಡ್ರೆ ಮತ್ತು ಎಲ್ಲ ಮಠಾಧೀಶರು ಸೇರಿ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ. ಪಕ್ಷ ಬೇರೆ, ಸಮಾಜ ರಾಜಕಾರಣವೇ ಬೇರೆ. ಸಮಾಜದಲ್ಲಿ ರಾಜಕಾರಣ ತರುವುದು ಬೇಡ. ಈ ಹಿಂದೆ ವೀರಶೈವ ಲಿಂಗಾಯತ ಪ್ರತೇಕ ಧರ್ಮದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿ ಇನ್ನೂ ರಿಜೆಕ್ಟ್ ಆಗಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.