ಆ ಮಹಿಳೆ ಜೊತೆಗೆ ಇಲ್ಲದಿದ್ದರೆ ಬಾಬಾಗೆ ನಿದ್ದೆಯೇ ಬರಲ್ಲ!: ರಾಮ್ ರಹೀಮ್ ಉತ್ತರಾಧಿಕಾರಿಯಾಗ್ತಾರಾ ಹನಿಪ್ರೀತ್?

Published : Aug 28, 2017, 08:24 AM ISTUpdated : Apr 11, 2018, 01:00 PM IST
ಆ ಮಹಿಳೆ ಜೊತೆಗೆ ಇಲ್ಲದಿದ್ದರೆ ಬಾಬಾಗೆ ನಿದ್ದೆಯೇ ಬರಲ್ಲ!: ರಾಮ್ ರಹೀಮ್ ಉತ್ತರಾಧಿಕಾರಿಯಾಗ್ತಾರಾ ಹನಿಪ್ರೀತ್?

ಸಾರಾಂಶ

ಅವನೊಬ್ಬ ರಾಕ್​ ಸ್ಟಾರ್​, ಅವನೊಬ್ಬ ಆಕ್ಟರ್​, ಅವನೊಬ್ಬ ಆಧ್ಯಾತ್ಮ ಗುರು, ಅವನು ಒಬ್ಬನೇ ಆದ್ರೆ ಅವನ ಅವತಾರಗಳು ಅನೇಕ. ಹೀಗೆ ನಾನಾ ಅವತಾರಗಳನ್ನು ಎತ್ತಿ ಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಬಾಬಾನ ಹಿಂದೆ ಒಬ್ಬ ಮಹಿಳೆ ಇದ್ದಾಳೆ? ಯಾರು ಆ ಮಹಿಳೆ? ಯಾವಾಗಲೂ ಬಾಬಾನ ಹಿಂದೆ ಆ ಮಹಿಳೆ ಇರುತ್ತಾಳೆ? ಬಾಬಾಗೂ ಆ  ಮಹಿಳೆಗೂ ಏನು ಸಂಬಂಧ ಅಂತೀರಾ ಈ ವರದಿ ನೋಡಿ.

ಬೆಂಗಳೂರು(ಆ.28): ಸ್ವಯಂಘೋಷಿತ ದೇವ ಮಾನವ ರಾಮ್ ರಹೀಮ್ ಬಾಬಾ ರೇಪ್ ಮಾಡಿ ಜೈಲಿನಲ್ಲಿದ್ದಾನೆ. ಆದ್ರೆ ಈ ಬಾಬಾ ಅಂತಿಂಥ ವ್ಯಕ್ತಿಯಲ್ಲ. ಭಲೇ ಕಿಲಾಡಿ. ಈತ ಬಣ್ಣದ ಬದುಕಲ್ಲೂ ಮುಳಿಗೆದ್ದು ಬಂದವ. ಮೆಸೆಂಜರ್ ಆಫ್ ಗಾಡ್ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ ಕಲಾಕಾರ. ಇಂಥಾ ಕಲಾವಿದ ಜೊತೆಗಿನ ಒಬ್ಬ ಮಹಿಳೆ ಇದ್ದಾಳೆ.

ಬಾಬಾ ಜೊತೆಗಿರಬೇಕು ಚೆಲುವೆ

ಈ ಮಾತು ಸತ್ಯ. ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಮ್ ಬಾಬಾನ ಹಿಂದೆ ಸದಾಕಾಲ ಆ ಮಹಿಳೆ  ಇರಲೇಬೇಕು. ಆ ಮಹಿಳೆ ಹೆಸರೇ ಹನಿಪ್ರೀತ್(Honeypreet). ಹರಿಯಾಣ ಮೂಲದ ಈ ಹನಿಪ್ರೀತ್. ಡೇರಾ ನಿವಾಸಿಯಾಗಿದ್ದು ಡಿಸೆಂಬರ್​ 2009ರಲ್ಲಿ. ಪ್ರಿಯಾಂಕ ಹೆಸರಿನ ಈಕೆ ಪತಿ ವಿಶ್ವಾಸ್​ ಜೊತೆ ಬಾಬಾನ ದರ್ಶನಕ್ಕೆ ಬಂದಿದ್ಲು. ಆದ್ರೆ ಅಲ್ಲಿ ಆಗಿದ್ದೇ ಬೇರೆ ಹನಿಪ್ರೀತ್ ಬಾಬಾನ ಮಾತಿಗೆ ಮರುಳಾಗಿ ಬಿಡ್ತಾಳೆ. ಮೊದಲ ಭೇಟಿಯಲ್ಲಿಯೇ ಪ್ರಿಯಾಂಕಗೆ ಹನಿಪ್ರೀತ್​ ಎಂದು ನಾಮಕರಣ ಮಾಡಿ ದತ್ತುಪುತ್ರಿ ಎಂದು ಸ್ವೀಕರಿಸುತ್ತಾನೆ ಈ ರೇಪಿಸ್ಟ್ ಬಾಬಾ.

ಅಂದಿನಿಂದ ಇಂದಿನವರೆಗೆ ಬಾಬಾ ಎಲ್ಲೆ ಹೋದ್ರೂ ಬಾಬಾ ಮತ್ತು ಹನಿಪ್ರೀತ್ ಜೊತೆಯಾಗಿ ಹೋಗ್ತಾಳೆ. ಬಾಬಾ ಎಲ್ಲೆ ಹೋಗಬೇಕಾದರೂ ಬಾಬಾ ಜೊತೆಗೆ ಹನಿಪ್ರೀತ್ ಇರಲೇ ಬೇಕಾಗಿತ್ತು. ಇದೇ ವಿಚಾರವಾಗಿ ಹನಿಪ್ರೀತ್​ ಪತಿ ವಿಶ್ವಾಸ ಮಧ್ಯ ಜಗಳವಾಗಿ ಕುಟುಂಬ ಬಿಟ್ಟು ಬಾಬಾನ ಆಶ್ರಮ ಸೇರಿದ್ದಳು ಈ ಹನಿಪ್ರೀತ್​.

ಮೇ 2011 ರಂದು ಹನಿಪ್ರೀತ್ ಪತಿ ವಿಶ್ವಾಸ್​ ಏಕಾಏಕಿ ಬಾಬಾನ ರೂಂಗೆ ನುಗ್ಗಿದ್ದ. ಈ ವೇಳೆ ಬಾಬಾ ಮತ್ತು ಹನಿಪ್ರೀತ್ ಮಧ್ಯ ಇರುವ ಸಂಬಂಧ ಬಯಲಾಗಿತ್ತು. ಯಾವಾಗ ಹನಿಪ್ರೀತ್ ಪತಿಗೆ ಬಾಬಾನ ವಿಷಯ ಗೊತ್ತಾಯಿತ್ತೋ, ಆಗ  ಬಾಬಾನ ಕಡೆಯವರು ವಿಶ್ವಾಸ್​​ ಕುಟುಂಬಕ್ಕೆ ಧಮ್ಕಿ ಹಾಕುತ್ತಾರೆ. ಆಗ ವಿಶ್ವಾಸ್​​ ಕುಟುಂಬದವರು ಕೋರ್ಟ್​ ಮೊರೆ ಹೋಗುತ್ತಾರೆ. 2014ರಲ್ಲಿ ಬಾಬಾನ ಕಡೆಯವರು ಧಮ್ಕಿ ಹೆಚ್ಚಾಗಿದ್ದರಿಂದ ಡೇರಾ ಬಿಟ್ಟ ಆ ವಿಶ್ವಾಸ ಕುಟುಂಬ ಬೇರೆ ಕಡೆ ಪ್ರಯಾಣ ಮಾಡಿತ್ತು.

ಅಂದಿನಿಂದ ಇಂದಿನವರೆಗೂ ಬಾಬಾ ಮತ್ತು ಹನಿಪ್ರೀತ್ ಜೊತೆಯಾಗಿ ಎಲ್ಲಡೆ ಮಿಂಚಿದ್ರು. ಅಷ್ಟೇ ಅಲ್ಲದೆ ಇಬ್ಬರು ದಿ ವಾರಿಯರ್: ಲಯನ್ ಹಾರ್ಟ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥೆ  ಆಗ್ತಾರಾ ಹನಿಪ್ರೀತ್​?

ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್ ಬಾಬಾ ಜೈಲಿಗೆ ಹೋಗೋದು ಖಾಯಂ ಆಗಿದೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥೆಯಾಗಿ ಬಾಬಾರ ದತ್ತುಪುತ್ರಿ ಹನಿಪ್ರೀತ್ ಆಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?