
ಬೆಂಗಳೂರು (ಫೆ.09): ಭಾರತದ ರಕ್ಷಣಾ ಸಂಬಂಧಿ ಗುಪ್ತ ಮಾಹಿತಿಯನ್ನು ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್'ಐ) ಜೊತೆ ಹಂಚಿಕೊಂಡಿರುವ ಆರೋಪದಡಿಯಲ್ಲಿ ವಾಯುಸೇನಾ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕ್ಯಾಪ್ಟನ್ ಅರುಣ್ ಮರ್ವಾಹ ಬಂಧಿತ ಅಧಿಕಾರಿ. ಇವರನ್ನು ವಾಯುಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳು ಜ. 31 ರಂದು ಬಂಧಿಸಿದ್ದರು. ಫೆ. 07 ರಂದು ದೆಹಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು.
ಐಎಸ್'ಐ ಏಜೆಂಟ್'ಗಳಿಂದ ಕ್ಯಾಪ್ಟನ್ ಅರುಣ್ ಮರ್ಮಾಹ ಹನಿ ಟ್ರಾಪ್'ಗೆ ಒಳಗಾಗಿದ್ದರು. ಅವರೊಂದಿಗೆ ದೇಶದ್ರೋಹವಾಗುವಂತಹ ಸಂಭಾಷಣೆಯನ್ನು ಮಾಡಿದ್ದಾರೆ ಎಂದು ಅವರ ಸಾಮಾಜಿಕ ಜಾಲತಾಣಗಳಿಂದ ತಿಳಿದು ಬರುತ್ತದೆ. ಅವರ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಎಫ್'ಐಆರ್'ನ್ನು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.