ನಾಳೆಯಿಂದ 4 ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 'ಜನಾಶೀರ್ವಾದ ಯಾತ್ರೆ' ಹೆಸರಲ್ಲಿ ಯಾತ್ರೆ ನಡೆಯಲಿದೆ.
ಬೆಂಗಳೂರು (ಫೆ.09): ನಾಳೆಯಿಂದ 4 ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 'ಜನಾಶೀರ್ವಾದ ಯಾತ್ರೆ' ಹೆಸರಲ್ಲಿ ಯಾತ್ರೆ ನಡೆಯಲಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ರಾಹುಲ್ ಯಾತ್ರೆ ಆರಂಭವಾಗಲಿದೆ. ಜನಾಶೀರ್ವಾದ ಯಾತ್ರೆಗೆ ವಿಶೇಷ ಬಸ್ಸನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ಕಾಂಗ್ರೆಸ್ ಮುಖಂಡರು ಬಸ್ಸನ್ನೇ ಬಳಸಬೇಕೆಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇದೇ ಬಸ್'ನಲ್ಲಿ ಪ್ರಯಾಣ ಬೆಳೆಸಿ ರಾಹುಲ್'ಗೆ ಸಾಥ್ ನೀಡಲಿದ್ದಾರೆ.