
ದಾವಣಗೆರೆ (ಮಾ. 25): ದಾವಣಗೆರೆಯಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯನ್ನು ಬಳಸಿಕೊಂಡು ಪತಿ ಹನಿ ಟ್ರ್ಯಾಪ್ ಮಾಡುತ್ತಿದ್ದ. ಬೆಳ್ಳಿ, ಬಂಗಾರ ವ್ಯಾಪಾರಿಯನ್ನ ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ಮಾಡಲು ಹೋಗಿ ದಂಪತಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಬಾವೀಶ್(34) ಹನಿಟ್ರ್ಯಾಪ್'ಗೊಳಗಾದ ಚಿನ್ನದ ವ್ಯಾಪಾರಿ. ಇವರನ್ನು ಮನೆಗೆ ಕರೆಸಿಕೊಂಡು ಪತ್ನಿ ಜೊತೆ ಭಾವೀಶ್’ನ ವಿಡಿಯೋವನ್ನ ಪತಿಯೇ ವಿಡಿಯೋ ಮಾಡಿ ಬ್ಲಾಕ್’ಮೇಲ್ ಮಾಡುತ್ತಿದ್ದರು.
ವೆಂಕಟೇಶ, ರೇಖಾ ಎಂಬ ದಂಪತಿ ಹನಿಟ್ರ್ಯಾಪ್ ಮಾಡಿದವರು. ಕಳೆದ 6 ತಿಂಗಳಿಂದ ಮೊಬೈಲ್ ಗೆ ಕಾಲ್ ಮಾಡಿ ಪರಿಚಯ ಮಾಡಿಕೊಂಡಿದ್ದರು. ಬಂಗಾರ ಖರೀದಿಸಲು ಅಂಗಡಿಗೆ ಹೋದಾಗ ನಂಬರ್ ಪಡೆದಿದ್ದರು. ಕೆಲ ತಿಂಗಳಿನಿಂದ ರೇಖಾ ಬಾವೀಶ್ ಗೆ ಫೋನ್ ಮಾಡಿ ಮಾತಾಡುತ್ತಿದ್ದಳು. ಫೋನ್ ಮಾಡಿ ಮನೆಗೆ ಕರೆದು ಪ್ರೀತಿಯ ನಾಟಕವಾಡಿದ್ದಳು. ನಂತರ ಪತಿ, ಪತ್ನಿ ಇಬ್ಬರೂ ಸೇರಿ ಬಾವೀಶ್ ನನ್ನು ಬ್ಲಾಕ್ ಮೇಲ್ ಮಾಡಿದ್ದರು.
ಇಂದು ಬಾವೀಶ್ ಪೊಲೀಸ್ ಮೊರೆ ಹೋಗಿದ್ದಾರೆ. ಬಸವನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.