
ನಿರ್ಜಲೀಕರಣ ಒಂದಿಲ್ಲೊಂದು ರೀತಿಯಲ್ಲಿ ಭಾದಿಸುತ್ತದೆ. ಕಾಡುವ ಈ ಡಿಹೈಡ್ರೇಶನ್ ತಡೆಯಲು ದೇಹಕ್ಕೆ ಸಾಕಷ್ಟು ನೀರಿನ ಅಗತ್ಯವಿದೆ. ಹಾಗೆಯೇ ನೀರನ್ನು ಕುಡಿಯಲು ಕೆಲವರಿಗೆ ವಾಕರಿಕೆ ಬಂದಂತೆ ಆಗಬಹುದು. ಆಗ ನೀರಿ ಕುಡಿಯದೇ ದೇಹ ನಿತ್ರಾಣವಾಗುತ್ತದೆ. ನಿಮ್ಮ ಈ ಸಮಸ್ಯೆ ನಿವಾರಣೆಗಾಗಿ ಇಲ್ಲಿದೆ ಕೆಲವು ಪಾನೀಯಗಳು.
ತಾಜಾ ಗಿಡಮೂಲಿಕೆಗಳು ಮತ್ತು ಹಣ್ಣಿನ ಚೂರುಗಳನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ಬೇಸಿಗೆಯ ಬಿರುಬಿಸಿಲಿನಲ್ಲಿ ಉಂಟಾಗುವ ನಿರ್ಜಲೀಕರಣವನ್ನು ದೂರವಾಗಿಸಬಹುದು.
ಪುದೀನಾ, ಕ್ಯಾಮೊಮೈಲ್, ಏಲಕ್ಕಿ, ಮಲ್ಲಿಗೆ ಮುಂತಾದ ಸುಗಂಧಭರಿತ ಹೂವುಗಳನ್ನು ಉಪಯೋಗಿಸಿ ಅದರ ಜೊತೆಗೆ ಕೆಲವು ಐಸ್ ತುಂಡುಗಳನ್ನು ಸೇರಿಸಿ ಸೇರಿಸಿ ಚಹಾ ಮಾಡಿ ಕುಡಿಯುವುದರಿಂದ ನಿರ್ಜಲೀಕರಣ ದೂರವಾಗುತ್ತದೆ.
ಪೌಷ್ಟಿಕತೆ ಹೊಂದಿರುವ ತಾಜಾ ಹಣ್ಣುಗಳ ರಸವನ್ನು ತೆಗೆದು, ಸ್ವಲ್ಪ ಸಕ್ಕರೆ ಸೇರಿಸಿ ಅದನ್ನು ಕುಡಿಯುವುದರಿಂದಲೂ ನಿರ್ಜಲೀಕರಣ ದೂರವಾಗುತ್ತದೆ.
ಬೇಸಿಗೆಯಲ್ಲಿ ಸೌತೆಕಾಯಿ ನೀರನ್ನು ಕುಡಿಯುವುದರಿಂದ ಅಥವಾ ಎಳೆಯದಾಗಿರುವ ಸೌತೆಕಾಯಿಯ ಚೂರುಗಳನ್ನು ತಿನ್ನುತ್ತಿರುವುದರಿಂದ ದೇಹ ತಂಪಾಗಿರುತ್ತದೆ ಜೊತೆಗೆ ನಿರ್ಜಲೀಕರಣವೂ ದೂರವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.