ವಿನಯ್ ಕುಲಕರ್ಣಿ ಪರ ನಿಂತ ಕೆಂಪಯ್ಯ; ಯೋಗೇಶ್ ಗೌಡ ಪತ್ನಿಯೊಂದಿಗೆ ಸಂಧಾನ ಮಾತುಕತೆ

Published : Nov 26, 2017, 02:15 PM ISTUpdated : Apr 11, 2018, 01:00 PM IST
ವಿನಯ್ ಕುಲಕರ್ಣಿ ಪರ ನಿಂತ ಕೆಂಪಯ್ಯ; ಯೋಗೇಶ್ ಗೌಡ ಪತ್ನಿಯೊಂದಿಗೆ ಸಂಧಾನ ಮಾತುಕತೆ

ಸಾರಾಂಶ

ಯೋಗೇಶ್ ಗೌಡ ಕೊಲೆ ಆರೋಪ  ಎದುರಿಸುತ್ತಿರುವ ಸಚಿವ ವಿನಯ್​ ಕುಲಕರ್ಣಿ ರಕ್ಷಣೆ ಮಾಡಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯ  ಅವರ ಬೆನ್ನಿಗೆ ನಿಂತಿದ್ದಾರೆ.

ಬೆಂಗಳೂರು (ನ.26): ಯೋಗೇಶ್ ಗೌಡ ಕೊಲೆ ಆರೋಪ ಎದುರಿಸುತ್ತಿರುವ ಸಚಿವ ವಿನಯ್​ ಕುಲಕರ್ಣಿ ರಕ್ಷಣೆ ಮಾಡಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯ  ಅವರ ಬೆನ್ನಿಗೆ ನಿಂತಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ  ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಧಾರವಾಡಕ್ಕೆ ತೆರಳಿದ್ದಾರೆ.  ಹುಬ್ಬಳ್ಳಿಯ ನವೀನ್​ ಹೋಟೆಲ್​​​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೊಲೆಯಾದ ಯೋಗೀಶ್​ ಗೌಡ ಪತ್ನಿಯ ಜೊತೆ ಕೆಂಪಯ್ಯ ಸಂಧಾನ ಮಾತುಕತೆ ಪ್ರಯತ್ನ ಮಾಡುತ್ತಿದ್ದಾರೆ.

ಯೋಗೀಶ್​ ಗೌಡ ಕೊಲೆ ಪ್ರಕರಣದಲ್ಲಿ ವಿನಯ್​ ಕುಲಕರ್ಣಿ ಕೈವಾಡ ಆರೋಪ ಬಲವಾಗಿ ಕೇಳಿ ಬಂದಾಗ  ಕಾಂಗ್ರೆಸ್​ ಸರ್ಕಾರ  ತೀವ್ರ ಮುಜುಗರಕ್ಕೆ ಒಳಗಾಗಿದೆ. ತಮ್ಮ ವಿರುದ್ಧ ತಿರುಗಿ ಬಿದ್ದವರನ್ನು ಸಮಾಧಾನಪಡಿಸಲು ಕೆಂಪಯ್ಯ ಯತ್ನಿಸುತ್ತಿದ್ದಾರೆ.  ಕೊಲೆಯಾದ ಯೋಗೀಶ್​ ಗೌಡ ಪತ್ನಿ ಕುರುಬ ಸಮುದಾಯಕ್ಕೆ ಸೇರಿದವರು.  ಕುರುಬ ಮುಖಂಡರ ಮಧ್ಯಸ್ಥಿಕೆಯಲ್ಲಿ ಮಲ್ಲಮ್ಮರೊಂದಿಗೆ ಸಂಧಾನ ಯತ್ನ ನಡೆಸುತ್ತಿದ್ದಾರೆ.  ಮಲ್ಲಮ್ಮರಿಂದಲೇ ವಿನಯ್​ ಕುಲಕರ್ಣಿ ಪರವಾಗಿ ಹೇಳಿಕೆ ಕೊಡಿಸಲು ಯತ್ನಿಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ