ದೋಸ್ತಿ ಸರ್ಕಾರಕ್ಕೆ 3ನೇ ಸಂಕಟ: ಮತ್ತೊಬ್ಬ ಕೈ ಶಾಸಕನಿಂದ ರಾಜೀನಾಮೆ ಬೆದರಿಕೆ

Published : Jul 06, 2019, 09:20 AM ISTUpdated : Jul 06, 2019, 09:23 AM IST
ದೋಸ್ತಿ ಸರ್ಕಾರಕ್ಕೆ 3ನೇ ಸಂಕಟ: ಮತ್ತೊಬ್ಬ  ಕೈ ಶಾಸಕನಿಂದ ರಾಜೀನಾಮೆ  ಬೆದರಿಕೆ

ಸಾರಾಂಶ

ಕಾಂಗ್ರೆಸ್ 3ನೇ ವಿಕೆಟ್ ಪತನವಾಗುತ್ತಾ..?| ಇಬ್ಬರ ರಾಜೀನಾಮೆ ಬೆನ್ನಲ್ಲೆ ಮತ್ತೊಂದು ಸಂಕಷ್ಟ| ರಾಜೀನಾಮೆ ಲಿಸ್ಟ್ನಲ್ಲಿ ಕಾಂಗ್ರೆಸ್ನ ಹೊಸ ಹೆಸರು| ಸಂಪುಟ ಸಭೆ ನಡೆಯೋದನ್ನೇ ಕಾಯ್ತಿದ್ದಾರಂತೆ ಶಾಸಕರು| ಬೆಡಿಕೆ ಈಡೇರದಿದ್ದರೆ ರಾಜೀನಾಮೆ ಶತಃಸಿದ್ಧ ಎಂದ ಶಾಸಕರು

ಚಿಕ್ಕಬಳ್ಳಾಪುರ[ಜು.06]: ಇಬ್ಬರ ರಾಜೀನಾಮೆ ಬೆನ್ನಲ್ಲೆ ಸೋಸ್ತಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜೀನಾಮೆ ಲಿಸ್ಟ್ನಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕನ ಹೆಸರು ಸೇರ್ಪಡೆಯಾಗಿದ್ದು, ತಮ್ಮ ಕ್ಷೇತ್ರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಷ್ಟಕ್ಕೂ ರಾಜೀನಾಮೆ ನೀಡಲು ಸಜ್ಜಾದ ಮೂರನೇ ಶಾಸಕ ಯಾರು? 

ಕಾಂಗ್ರೆಸ್ ನಾಯಕ, ಬಾಗೇಪಲ್ಲಿ ಶಾಸಕ  ಎಸ್. ಎನ್. ಸುಬ್ಬಾರೆಡ್ಡಿ ಸದ್ಯ ದೋಸ್ತಿ ಸರ್ಕಾರದ ಟೆನ್ಶನ್ ಹೆಚ್ಚಿಸಿದ್ದಾರೆ. ಎಚ್ಎನ್ ವ್ಯಾಲಿ ನೀರಿನ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿರುವ ಸುಬ್ಬಾರೆಡ್ಡಿ, ಬಾಗೇಪಲ್ಲಿಗೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಚೇಳೂರಿನಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಗುಡುಗಿದ್ದಾರೆ.

ವೈಯಕ್ತಿಕ ಬೆಳವಣಿಗೆ, ವ್ಯವಹಾರಕ್ಕಾಗಿ ಶಾಸಕನಾಗಿಲ್ಲ, ಜನರ ಸಮಸ್ಯೆಗೆ ಸ್ಪಂದಿಸಲು ಶಾಸಕನಾಗಿದ್ದೇನೆ. ನೀರು ಬಿಡಿ, ಇಲ್ಲವಾದ್ರೆ ರಾಜೀನಾಮೆ ತೆಗೆದುಕೊಳ್ಳಿ ಎಂದಿರುವ ಕೈ ಶಾಸಕ ಕ್ಯಾಬಿನೆಟ್ ಸಭೆ ನಡೆಯಲು ಕಾಯುತ್ತಿದ್ದೇನೆ. ಒಂದು ವೇಳೆ ಈ ಸಭೆಯಲ್ಲಿ ತನ್ನ ಬೇಡಿಕೆ ಈಡೇರದಿದ್ದಲ್ಲ ರಾಜೀನಾಮೆ ನೀಡುವುದು ಖಚಿತ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್