
ಆನಂದ್ ಎಂ.ಸೌದಿ
ಯಾದಗಿರಿ[ಆ.11]: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಆಲಮಟ್ಟಿಜಲಾಶಯದಿಂದ 5 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ನಾರಾಯಣಪುರ ಜಲಾಶಯದ ಒಳ ಹರಿವಿನ ಪ್ರಮಾಣ 6.25 ಲಕ್ಷ ಕ್ಯುಸೆಕ್ಗೆ ಏರಿದೆ. ಇಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಹೀಗಾಗಿ ಕಳೆದ 10 ದಿನದಲ್ಲಿ 325 ಟಿಎಂಸಿ ನೀರು ಸಮುದ್ರ ಸೇರಿದೆ!
2009ರ ಮಳೆ ಪ್ರವಾಹ ಸಂದರ್ಭದಲ್ಲಿ, ಸೆಪ್ಟೆಂಬರ್ 30ರಿಂದ ಅಕ್ಟೋಬರ್ 3 ರವರೆಗಿನ ಅವಧಿಯಲ್ಲಿ 5 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿತ್ತು. ಈಗ, ಇದೇ ಮೊದಲ ಬಾರಿಗೆ ಅನ್ನುವಂತೆ ಆಲಮಟ್ಟಿಹಾಗೂ ಮಲಪ್ರಭೆಯಿಂದ 6.50 ಲಕ್ಷ ಕ್ಯುಸೆಕ್ ನೀರು ಒಳಹರಿವು ಬಂದಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಶನಿವಾರ ಸಂಜೆ 27 ಗೇಟುಗಳ ಮೂಲಕ (6.25 ಲಕ್ಷ ಕ್ಯುಸೆಕ್) ಕೃಷ್ಣೆಗೆ ಹರಿಸಲಾಗಿದೆ.
ಜಲಾಶಯದ ಅಧಿಕಾರಿಗಳ ಮೂಲಗಳ ಪ್ರಕಾರ, ಜುಲೈ 30 ರಿಂದ ಆ.10 ರವರೆಗೆ (ಸಂಜೆ 6 ಗಂಟೆವರೆಗೆ), ಈ ಹತ್ತು ದಿನಗಳ ಅವಧಿಯಲ್ಲಿ ಒಟ್ಟು 325 ಟಿಎಂಸಿ ನೀರು ಹರಿದು ಹೋಗಿದೆ. ಭಾನುವಾರದವರೆಗೆ ಇನ್ನೂ 20-25 ಟಿಎಂಸಿ ನೀರು ಹೋಗಬಹುದು.
ಪಾಯಿಂಟ್
-ಬಸವ ಸಾಗರ ಜಲಾಶಯದ ಉದ್ದ : 10.637 ಕಿ.ಮೀ.
-ಜಲಾಶಯದ ಎತ್ತರ : 492.5 ಮೀ. (29 ಗೇಟುಗಳು)
-ಸಂಗ್ರಹ ಸಾಮರ್ಥ್ಯ : 37.60 ಟಿ.ಎಂ.ಸಿ.
-ನೀರಾವರಿ ಪ್ರದೇಶ : 10 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿಗೆ ಸಹಕಾರಿ
-1982ರಲ್ಲಿ ಸೇತುವೆ ಲೋಕಾರ್ಪಣೆ: 41.40 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.