
ಕೊಟ್ಟಾಯಂ : ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.
ಈ ಸಂಬಂಧ ಆಯಾ ಮಾಧ್ಯಮಗಳ ಸಂಪಾದಕರಿಗೆ ಅದು ಪತ್ರ ಬರೆದಿದೆ. ‘ಪರಿಸ್ಥಿತಿ ಉದ್ವಿಗ್ನಗೊಳ್ಳುವ ಕ್ರಮವನ್ನು ನೀವು ಕೈಗೊಳ್ಳುವುದಿಲ್ಲ ಎಂದು ನಂಬಿದ್ದೇವೆ’ ಎಂದು ಅದು ಪತ್ರದಲ್ಲಿ ತಿಳಿಸಿದೆ.
ಕಳೆದ ಸಲ ಮಾಸಿಕ ಪೂಜೆಯ ವೇಳೆ ದೇಗುಲ ತೆರೆದ ಸಂದರ್ಭದಲ್ಲಿ ಈ ವಯೋಮಾನದ ಮಹಿಳಾ ಪತ್ರಕರ್ತರು ವರದಿಗಾರಿಕೆಗೆ ಬಂದಾಗ ಕೆಲವು ಕಿಡಿಗೇಡಿಗಳು ದಾಳಿ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಪತ್ರಕರ್ತೆ ಪೂಜಾ ಪ್ರಸನ್ನ ಸೇರಿದಂತೆ ಹಲವರು ದಾಳಿಗೆ ತುತ್ತಾಗಿದ್ದರು. ಅವರ ಕಾರುಗಳನ್ನು ಜಖಂಗೊಳಿಸಲಾಗಿತ್ತು.
ಭದ್ರತೆಗೆ 50ಕ್ಕಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರು
ಶಬರಿಮಲೆ: ಅನಗತ್ಯ ಗೊಂದಲ ತಪ್ಪಿಸುವ ಉದ್ದೇಶದಿಂದ ಶಬರಿಮಲೆಯಲ್ಲಿ 50 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರನ್ನೇ ನಿಯೋಜಿಸಲು ಕೇರಳ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ