5 ಲಕ್ಷ ಕೊಟ್ಟರೆ ಮಿಂಚಿಗಿಂತ ವೇಗವಾಗಿ ಕೆಲಸ!

Published : Jun 26, 2018, 08:57 AM IST
5 ಲಕ್ಷ ಕೊಟ್ಟರೆ ಮಿಂಚಿಗಿಂತ ವೇಗವಾಗಿ ಕೆಲಸ!

ಸಾರಾಂಶ

ಐದು ಲಕ್ಷ ರು. ಕೈಗಿಟ್ಟರೆ ಅಧಿಕಾರಿಗಳು ಕೆಲಸಗಳನ್ನು ಮಿಂಚಿಗಿಂತ ವೇಗವಾಗಿ ಮಾಡುತ್ತಾರೆ. ಹಣ ನೀಡದಿದ್ದರೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ. ಕೋರ್ಟ್‌ ಆದೇಶ ಪಾಲನೆಯ ವಿಳಂಬಕ್ಕೆ ಕಾರಣ ಕೇಳಿದರೆ ಮಾತ್ರ ಚುನಾವಣೆ ನೆಪ ಹೇಳುತ್ತಾರೆ. ಚುನಾವಣೆ ಇದ್ದರೆ ಅಧಿಕಾರಿಗಳು ಊಟ-ತಿಂಡಿ, ನಿದ್ರೆ ಮಾಡುವುದಿಲ್ಲವೇ? ಸಚಿವರು ಹಾಗೂ ಮುಖ್ಯಮಂತ್ರಿಗಳು ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದಿಲ್ಲವೇ ಎಂದು ಹೈಕೋರ್ಟ್‌ ಕಠೋರವಾಗಿ ಪ್ರಶ್ನಿಸಿದೆ.

 ಬೆಂಗಳೂರು (ಜೂ. 26):  ಐದು ಲಕ್ಷ ರು. ಕೈಗಿಟ್ಟರೆ ಅಧಿಕಾರಿಗಳು ಕೆಲಸಗಳನ್ನು ಮಿಂಚಿಗಿಂತ ವೇಗವಾಗಿ ಮಾಡುತ್ತಾರೆ. ಹಣ ನೀಡದಿದ್ದರೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ. ಕೋರ್ಟ್‌ ಆದೇಶ ಪಾಲನೆಯ ವಿಳಂಬಕ್ಕೆ ಕಾರಣ ಕೇಳಿದರೆ ಮಾತ್ರ ಚುನಾವಣೆ ನೆಪ ಹೇಳುತ್ತಾರೆ. ಚುನಾವಣೆ ಇದ್ದರೆ ಅಧಿಕಾರಿಗಳು ಊಟ-ತಿಂಡಿ, ನಿದ್ರೆ ಮಾಡುವುದಿಲ್ಲವೇ? ಸಚಿವರು ಹಾಗೂ ಮುಖ್ಯಮಂತ್ರಿಗಳು ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದಿಲ್ಲವೇ ಎಂದು ಹೈಕೋರ್ಟ್‌ ಕಠೋರವಾಗಿ ಪ್ರಶ್ನಿಸಿದೆ.

ಸ್ಮಶಾನ ಭೂಮಿಗಾಗಿ ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ಸಿಂಗಾಪುರ ಗ್ರಾಮದ ಎಸ್‌.ವಿ.ಯೋಗೇಶ್ವರ್‌ ಎಂಬುವರಿಗೆ ಸೇರಿದ 24 ಗುಂಟೆ ಜಾಗವನ್ನು ಬೆಂಗಳೂರು ನಗರ ಜಿಲ್ಲಾಡಳಿತ ಭೂಸ್ವಾಧೀನ ಆದೇಶವನ್ನು ಹೊರಡಿಸದೇ ವಶಪಡಿಸಿಕೊಂಡಿತ್ತು. ಹೀಗಾಗಿ ಪರ್ಯಾಯ ಜಮೀನು ಕಲ್ಪಿಸುವಂತೆ ಹೈಕೊರ್ಟ್‌ ಆದೇಶಿಸಿದ್ದರೂ, ಒಂದು ವರ್ಷದಿಂದ ಆ ಆದೇಶ ಪಾಲಿಸಿರಲಿಲ್ಲ. ಇದರಿಂದ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು.

ಪ್ರಕರಣದ ಕುರಿತು ವಿವರಣೆ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೈಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಈ ವೇಳೆ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್‌ ಅವರು ಪ್ರತಿಕ್ರಿಯಿಸಿ, ಪ್ರಕರಣದ ಸಂಬಂಧ ನ್ಯಾಯಾಲಯವು ಆದೇಶ ಹೊರಡಿಸಿ ಒಂದು ವರ್ಷ ಕಳೆದಿದೆ. ಅದನ್ನು ಇನ್ನೂ ಏಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ