ನನ್ನಹಾಗೂದೇವೇಗೌಡರಹೆಸರಿಗೆಮಸಿಬಳಿಯೋಕೆಲಸಮಾಡಿದ್ದಾರೆ.
ಮೈಸೂರು(ಫೆ.17): ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರ್ಪಡೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳಲೇ ಕೇಶವಮೂರ್ತಿಗೆ ನಾವಾಗೇ ಕಾಂಗ್ರೆಸ್ ಸೇರು ಅಂತ ಹೇಳಿಲ್ಲಾ..ನನ್ನ ಹಾಗೂ ದೇವೇಗೌಡರ ಹೆಸರಿಗೆ ಮಸಿ ಬಳಿಯೋ ಕೆಲಸ ಮಾಡಿದ್ದಾರೆ. ನಂಜನಗೂಡು ಉಪ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳು ಬೇರೆ ಪಕ್ಷದ ಮುಖಂಡರನ್ನು ಅಭ್ಯರ್ಥಿಯಾಗಿಸಿವೆ. ಆದ್ದರಿಂದ ನಂಜನಗೂಡು ಉಪಚುನಾವಣೆಗೆ ಹೊಸ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಇಂದು ಸಂಜೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.