ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಸಿಎಂರನ್ನು ತಡೆದ ರೇವಣ್ಣ

Published : Jul 05, 2018, 01:27 PM IST
ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಸಿಎಂರನ್ನು ತಡೆದ ರೇವಣ್ಣ

ಸಾರಾಂಶ

ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಹೋದರ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ತಡೆದ ಘಟನೆ ಇಂದು ನಡೆದಿದೆ. 

ಬೆಂಗಳೂರು :  ಇಂದು ಬಜೆಟ್ ಮಂಡಿಸಲು ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಹೋದರ ರೇವಣ್ಣ ಅವರ ವಾಸ್ತು ಎಫೆಕ್ಟ್ ಆಗಿದೆ. ಎಂದಿನಂತೆ ಮುಖ್ಯಮಂತ್ರಿಗಳಿಗೆ ಇರುವ ಲಿಫ್ಟ್ ನಲ್ಲೂ ವಾಸ್ತು  ನೋಡಿದ ರೇವಣ್ಣ ಅವರು ಅದನ್ನು ಬಳಸಲು ಬಿಡಲಿಲ್ಲ. 

ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಸಿಎಂ ಗೆ ರೆಗ್ಯುಲರ್ ಲಿಫ್ಟ್ ಬಳಸಲು ಬಿಡದೇ, ಅಧಿಕಾರಿಗಳು ಬಳಸುವ ಲಿಫ್ಟ್ ಅನ್ನು ನಿಲ್ಲಿಸಿ ಅದರಲ್ಲಿ ಹೋಗಲು ಸೂಚನೆ ನೀಡಿದರು. 

ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಮುಹೂರ್ತ, ವಾಸ್ತು ಎಂದು ನೋಡುತ್ತಿರುವ ರೇವಣ್ಣ ಅವರ ವಾಸ್ತು ನಡೆ ಇಂದು ಮುಖ್ಯಮಂತ್ರಿಗಳ ಮೇಲೂ ಪ್ರಭಾವ ಆಗಿದೆ.  

ಬಜೆಟ್ ಮಂಡನೆ ಕೂಡಾ ಶುಕ್ರವಾರದ ಬದಲಿಗೆ ಗುರುವಾರ ಮಂಡಿಸಲು ರೇವಣ್ಣ ಅವರೇ ನಿಗದಿ ಪಡಿಸಿದ್ದು,  ಶುಕ್ರವಾರ ಅಷ್ಟಮೀ ತಿಥಿ ಇರುವ ಕಾರಣದಿಂದ  ಒಂದು ದಿನ ಮೊದಲೇ  ಬಜೆಟ್ ಮಂಡನೆ ಮಾಡಬೇಕು ಎಂದು ಸೂಚಿಸಿದ್ದರು ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ