
ಹಾಸನ: ಮೆಣಸಿನಕಾಯಿ ಬಜ್ಜಿ ತಿಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಸಚಿವರ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವರಿಗೆ ಹೋಟೆಲ್ ಮಾಣಿ ಮೆಣಸಿನಕಾಯಿ ಬಜ್ಜಿ ತಂದು ನೀಡಿದ್ದ. ರೇವಣ್ಣ ಅದನ್ನು ತಿಂದಿದ್ದೇ ತಡ ಕಣ್ಣಲ್ಲಿ ನೀರು ಸುರಿಯಲು ಆರಂಭಿಸಿತು. ಕಣ್ಣೀರು ಒರೆಸಿಕೊಂಡು, ನೀರು ಕುಡಿದು ಸುಧಾರಿಸಿಕೊಂಡರು.
ಆ ಕ್ಷಣದಲ್ಲಿ ಸಚಿವರು ಬಜ್ಜಿ ನೀಡಿದ ಹೋಟೆಲ್ ಮಾಣಿಯನ್ನು ಉದ್ದೇಶಿಸಿ ಜೈಲಲ್ಲಿ ನೀಡುವ ರೀತಿ ಖಾರದ ಬಜ್ಜಿ ನೀಡ್ತಿಯಲ್ಲಪ್ಪ, ನಂಗೆ ಮೆಣಸಿನ ಕಾಯಿ ಬಜ್ಜಿ ಬೇಡ ಆಲೂಗಡ್ಡೆ ಅಥವಾ ಹೀರೇಕಾಯಿ ಬಜ್ಜಿ ನೀಡು ಎಂದು ಹೇಳಿ ತಮಾಷೆ ಮಾಡಿದರು. ಇನ್ನು ಮುಂದೆ ಮೆಣಸಿನಕಾಯಿ ಬಜ್ಜಿನೇ ತಿನ್ನಬಾರದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಕ್ಕು ಬಿಟ್ಟರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.