
ಹಾಸನ: ‘ರೇವಣ್ಣಗೆ 24 ಗಂಟೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂಬ ಹುಚ್ಚು ಮತ್ತು ಕನಸಿದೆ. ಅದು ನನಸಾಗಬೇಕಾದರೆ ಮೊದಲು ಕೋಪ ಬಿಡಬೇಕು, ಆತುರ ತ್ಯಜಿಸಬೇಕು.’
ಹೀಗೆ ತಮ್ಮ ಸಹೋದರ ಸಚಿವ ಎಚ್.ಡಿ. ರೇವಣ್ಣನವರಿಗೆ ಕಿವಿಮಾತು ಹೇಳಿದ್ದು ಇನ್ಯಾರೂ ಅಲ್ಲ. ಅವರ ಕಿರಿಯ ಸಹೋದರ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.
ಚನ್ನರಾಯಪಟ್ಟಣದ ಉದಯಪುರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ ರೇವಣ್ಣ ಹೃದಯವಂತ. ಆದರೆ ಕೋಪಿಸಿಕೊಳ್ಳುವುದು ಹುಟ್ಟು ಗುಣ. ಇದರಿಂದ ಆತ ಮಾಡಿದ ಬೆಟ್ಟದಷ್ಟುಅಭಿವೃದ್ಧಿ ಕೆಲಸಗಳೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತೆ ಆಗುತ್ತಿದೆ. ಕೋಪ ಬಿಟ್ಟರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು’ ಎಂದರು.
ನನ್ನ ಬಳಿ ರೇವಣ್ಣ ಬಂದು ಹಾಸನ ಜಿಲ್ಲೆ ಅಭಿವೃದ್ಧಿಗೆ ಓವರ್ ನೈಟ್ ಹಣ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿಯುತ್ತಾನೆ. ಆತುರ ಬಿಡಬೇಕು. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದಾಗ, ವೇದಿಕೆಯಲ್ಲಿದ್ದ ರೇವಣ್ಣ, ‘ಆಯ್ತು ಬಾರಣ್ಣ’ ಎಂದು ನಕ್ಕರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.