
ಉಡುಪಿ (ಜ.30): ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕಡೆಗೋಲು ಕೃಷ್ಣನಿಗೆ ವಿಶೇಷ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ರಾಜಿನಾಮೆ ಕುರಿತು ಮಾತನಾಡಿದ ಅವರು, ಕೃಷ್ಣ ಪ್ರಬುದ್ಧ ರಾಜಕಾರಣಿ, ಅವರ ಮುಂದಿನ ಮಾರ್ಗ ಅವರಿಗೆ ಬಿಟ್ಟದ್ದು, ಅವರನ್ನು ಸಂಪರ್ಕಿಸುವುದಿಲ್ಲವೆಂದಿದ್ದಾರೆ.
ಜಾಫರ್ ಷರೀಫ್ ಪಕ್ಷ ತೊರೆಯುವ ಬಗ್ಗೆ ಗೊತ್ತಿಲ್ಲ, ನನಗೂ ಷರೀಫ್ ಗೂ ಸಂಬಂಧವಿಲ್ಲವೆಂದೂ ಅವರು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಭಾರತ ಹಲವು ಧರ್ಮಗಳನ್ನೊಳಗೊಂಡ ದೇಶ, ಇಲ್ಲಿ ಹಲವು ಜಾತಿ-ಸಂಸ್ಕೃತಿಯಿದೆ, ಪಾರ್ಲಿಮೆಂಟಲ್ಲಿ ಸಮಯ ಬಂದಾಗ ನನ್ನ ವಾದ ಮಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.