(Video) ಪ್ರಭಾಕರ್ ಭಟ್ ಎಂಥವನು ಅನ್ನೋದು ನನಗೆ ಗೊತ್ತು: ಹೆಚ್. ಡಿ. ದೇವೇಗೌಡ

By Suvarna Web DeskFirst Published Aug 20, 2017, 3:17 PM IST
Highlights

ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಅನುದಾನ ಕಡಿತ ಮಾಡಿದ ವಿಚಾರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ವಿಜಯಪುರ(ಆ.20): ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಅನುದಾನ ಕಡಿತ ಮಾಡಿದ ವಿಚಾರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

'ಆತ ಎಂಥವನು ಎಂಬುದೂ ನನಗೆ ಚೆನ್ನಾಗಿ ತಿಳಿದಿದೆ, ಭಟ್ ಏನು ಎನ್ನುವುದು ನನಗೆ ಗೊತ್ತಿತ್ತು. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಕೊಲೆ ಮಾಡಲಾಯಿತು. ಆ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಸೂಚನೆ ನೀಡಿದ್ದೆ. ಆದರಂತೆ 19 ಜನರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಅಟ್ಟಿತ್ತು. ಆ ಕ್ರಮವನ್ನು ಸಿದ್ದರಾಮಯ್ಯ ರಾಜ್ಯ ಸರ್ಕಾರ ಕೈಗೊಳ್ಳದಿರುವುದು ವಿಪರ್ಯಾ ಸ. ಆದರೆ ಈ ಸಲ ಸಿದ್ದರಾಮಯ್ಯ ಸರ್ಕಾರ ಸರಿಯ ಅನುದಾನ ಕಡಿತ ಮಾಡಬಾರದಾಗಿತ್ತು'

ಇದು ಮಾಜಿ ಪ್ರಧಾನಿ ದೇವೇಗೌಡರು ಕಲ್ಲಡ್ಕ ಪ್ರಾಕರ ಕುರಿತಾಗಿ ಹೇಳಿದ ಮಾತುಗಳಾಗಿವೆ.

click me!