ರಾಜಧಾನಿ ಬಾರ್ ಮಾಲೀಕರಿಗೆ ಮತ್ತೊಮ್ಮೆ ನಿರಾಸೆ : ಹೆದ್ದಾರಿ ಬಳಿ ಬಾರ್ ಪುನರಾರಂಭಕ್ಕೆ ಹೈಕೋರ್ಟ್ ನಕಾರ

Published : Aug 22, 2017, 10:29 PM ISTUpdated : Apr 11, 2018, 01:07 PM IST
ರಾಜಧಾನಿ ಬಾರ್ ಮಾಲೀಕರಿಗೆ ಮತ್ತೊಮ್ಮೆ ನಿರಾಸೆ : ಹೆದ್ದಾರಿ ಬಳಿ ಬಾರ್ ಪುನರಾರಂಭಕ್ಕೆ ಹೈಕೋರ್ಟ್ ನಕಾರ

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್​ಗಳ ಪುನರಾರಂಭಕ್ಕೆ ಅವಕಾಶ ಕೋರಿ, ಬ್ರಿಗೇಡ್‌ ರಸ್ತೆಯ ಸಿದ್ದಿ ಎಂಟರ್‌ಪ್ರೈಸಸ್‌ ಮತ್ತಿತರ ಬಾರ್ ಅಂಡ್  ರೆಸ್ಟೋರೆಂಟ್‌ ಮಾಲೀಕರು ಹೈಕೋರ್ಟ್​ಗೆ  ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು(ಆ.22): ರಾಜಧಾನಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾರ್ ಮತ್ತು ಪಬ್​ಗಳ ಪುನರಾರಂಭಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್​ ವಜಾಗೊಳಿಸಿದೆ.

ನ್ಯಾಯಮೂರ್ತಿ ನವೀನ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.  ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್​ಗಳ ಪುನರಾರಂಭಕ್ಕೆ ಅವಕಾಶ ಕೋರಿ, ಬ್ರಿಗೇಡ್‌ ರಸ್ತೆಯ ಸಿದ್ದಿ ಎಂಟರ್‌ಪ್ರೈಸಸ್‌ ಮತ್ತಿತರ ಬಾರ್ ಅಂಡ್  ರೆಸ್ಟೋರೆಂಟ್‌ ಮಾಲೀಕರು ಹೈಕೋರ್ಟ್​ಗೆ  ಅರ್ಜಿ ಸಲ್ಲಿಸಿದ್ದರು. ಈ ತೀರ್ಪಿನಿಂದ ಬಾರ್ ಮಾಲೀಕರು ಹಾಗೂ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್‌ ತನ್ನ ತೀರ್ಪನ್ನು ಮರುಪರಿಶೀಲಿಸದ ಹಿನ್ನಲೆಯಲ್ಲಿ,  ಬಾರ್​ಗಳ ಪುನರಾರಂಭಕ್ಕೆ ಅವಕಾಶ ಕೋರಿದ್ದ ಮನವಿಯನ್ನ ಹೈಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ರಾಜಧಾನಿಯ ಹೆದ್ದಾರಿ ಪಬ್ ಅಂಡ್ ಬಾರ್'ಗಳ ಪುನರಾರಂಭದ ಕನಸಿಗೆ  ಹಿನ್ನಡೆಯಾದಂತಾಗಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ