ಹಾಸನದ ದಂಡುಪಾಳ್ಯ ಗ್ಯಾಂಗ್`ನ ಮತ್ತೊಂದು ಕ್ರೈಂ ಬಹಿರಂಗ

Published : Oct 28, 2016, 02:05 PM ISTUpdated : Apr 11, 2018, 12:36 PM IST
ಹಾಸನದ ದಂಡುಪಾಳ್ಯ ಗ್ಯಾಂಗ್`ನ ಮತ್ತೊಂದು ಕ್ರೈಂ ಬಹಿರಂಗ

ಸಾರಾಂಶ

ಹಾಸನದ ಚನ್ನಪಟ್ಟಣದ ನರ್ಸ್ ನಂಜಮ್ಮ ಅವರನ್ನ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ರೂಪಾಳ ಮನೆಯನ್ನ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದ ನಂಜಮ್ಮನನ್ನ ಕೊಲೆಗೈದು ಮೈಮೇಲಿದ್ದ 150 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿತ್ತು. 65 ವರ್ಷದ ನರ್ಸ್​ ನಂಜಮ್ಮ ಮನೆಯವರೊಂದಿಗೆ ಮುನಿಸಿಕೊಂಡು ​ಒಂಟಿಯಾಗಿ ಬದುಕುತ್ತಿದ್ದರು. ಒಂದು ವರ್ಷದ ಹಿಂದೆ ಮನೆಯೊಳಗೆ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದರು. ನಂಜಮ್ಮರಿಗೆ ಲೋ ಬಿಪಿ ಇದ್ದ ಕಾರಣ ಸಹಜವಾಗಿ ಸಾವಿಗೀಡಾಗಿರಬಹುದು ಅಂತಾ ಮನೆಯವರು ಕೂಡ ಸುಮ್ಮನಾಗಿದ್ದರು.

ಹಾಸನ(ಅ.28): ಹಾಸನದ ದಂಡುಪಾಳ್ಯ ಗ್ಯಾಂಗ್​ 3 ಕೊಲೆಗಳನ್ನು ಮಾಡಿ ರಾಜ್ಯದ ಜನ ಬೆಚ್ಚಿಬೀಳುವಂತೆ ಮಾಡಿತ್ತು. ಆದರೆ, ಆ ಲೇಡಿ ಕಿಲ್ಲರ್ಸ್​ ಗ್ಯಾಂಗ್​ ಮತ್ತೊಂದು ಶಾಕ್​ ನೀಡಿದೆ. ಆ ಗ್ಯಾಂಗ್​ ಮಾಡಿದ್ದು ಮೂರಲ್ಲ, ನಾಲ್ಕು ಕೊಲೆ ಎನ್ನುವ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಗ್ಯಾಂಗ್ ಲೀಡರ್​ ರೂಪಾ ಮತ್ತೊಂದು ಮಹಿಳೆಯನ್ನು ಕೊಲೆ ಮಾಡಿರುವ ಸ್ಫೋಟಕ ಮಾಹಿತಿಯನ್ನ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.

ಹಾಸನದ ಚನ್ನಪಟ್ಟಣದ ನರ್ಸ್ ನಂಜಮ್ಮ ಅವರನ್ನ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ರೂಪಾಳ ಮನೆಯನ್ನ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದ ನಂಜಮ್ಮನನ್ನ ಕೊಲೆಗೈದು ಮೈಮೇಲಿದ್ದ 150 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿತ್ತು. 65 ವರ್ಷದ ನರ್ಸ್​ ನಂಜಮ್ಮ ಮನೆಯವರೊಂದಿಗೆ ಮುನಿಸಿಕೊಂಡು ​ಒಂಟಿಯಾಗಿ ಬದುಕುತ್ತಿದ್ದರು. ಒಂದು ವರ್ಷದ ಹಿಂದೆ ಮನೆಯೊಳಗೆ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದರು. ನಂಜಮ್ಮರಿಗೆ ಲೋ ಬಿಪಿ ಇದ್ದ ಕಾರಣ ಸಹಜವಾಗಿ ಸಾವಿಗೀಡಾಗಿರಬಹುದು ಅಂತಾ ಮನೆಯವರು ಕೂಡ ಸುಮ್ಮನಾಗಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಪುಟ ಪುನಾರಚನೆ ಕುರಿತು ಮಾಹಿತಿಯಿಲ್ಲ: ಸಚಿವ ಸಂತೋಷ್ ಲಾಡ್‌ ಸ್ಪಷ್ಟನೆ
ರಿಯಾಯಿತಿ ದರದ ಭೂಮಿ ಮಾರಾಟಕ್ಕೆ ಹಕ್ಕಿಲ್ಲ: ಇನ್ಫೋಸಿಸ್‌ಗೆ ಕಾರ್ತಿ ಚಿದಂಬರಂ ತಿರುಗೇಟು