ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ತಡೆದು ನಿಲ್ಲಿಸಿದ ಬಿಜೆಪಿ ನಾಯಕ; ಆ್ಯಂಬುಲೆನ್ಸ್'ನಲ್ಲಿಯೇ ರೋಗಿ ಸಾವು

Published : Aug 07, 2017, 06:14 PM ISTUpdated : Apr 11, 2018, 12:40 PM IST
ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ತಡೆದು ನಿಲ್ಲಿಸಿದ ಬಿಜೆಪಿ ನಾಯಕ; ಆ್ಯಂಬುಲೆನ್ಸ್'ನಲ್ಲಿಯೇ ರೋಗಿ ಸಾವು

ಸಾರಾಂಶ

ತಮ್ಮ ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ಕೋಪಗೊಂಡ ಬಿಜೆಪಿ ನಾಯಕರೊಬ್ಬರು ಆ್ಯಂಬುಲೆನ್ಸನ್ನು 30 ಕ್ಕೂ ಹೆಚ್ಚು ನಿಮಿಷ ತಡೆಗಟ್ಟಿದ ಕಾರಣ ಅದರಲ್ಲಿದ್ದ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹರ್ಯಾಣ (ಆ.07): ತಮ್ಮ ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ಕೋಪಗೊಂಡ ಬಿಜೆಪಿ ನಾಯಕರೊಬ್ಬರು ಆ್ಯಂಬುಲೆನ್ಸನ್ನು 30 ಕ್ಕೂ ಹೆಚ್ಚು ನಿಮಿಷ ತಡೆಗಟ್ಟಿದ ಕಾರಣ ಅದರಲ್ಲಿದ್ದ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ನವೀನ್ ಕುಮಾರ್ ಎಂಬುವವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದಾರಿಯಲ್ಲಿ  ಫತೇಹಾಬಾದ್ ಬಿಜೆಪಿ ಕೌನ್ಸಲರ್  ದರ್ಶನ್ ನಾಗಪಾಲ್’ ಕಾರಿಗೆ ಅಂಬುಲೆನ್ಸ್ ತಾಗಿದೆ. ಕೋಪಗೊಂಡ ಬಿಜೆಪಿ ಕೌನ್ಸಲರ್ ಅಂಬುಲೆನ್ಸನ್ನು ಹೋಗುವುದಕ್ಕೆ ಬಿಡದೇ ಅರ್ಧ ಗಂಟೆಗೂ ಹೆಚ್ಚು ಹೊತ್ತು ತಡೆ ಹಿಡಿದಿದ್ದಾರೆ. ಡ್ರೈವರ್ ಬಳಿ ಪರಿಹಾರ ಕೊಡುವಂತೆ ಸತಾಯಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರೋಗಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗದೇ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿ ಆರೋಪಿಸಿದ್ದಾರೆ.

ಆದರೆ ದರ್ಶನ್ ನಾಗಪಾಲ್ ಈ ಆರೋಪವನ್ನು ತಳ್ಳಿ ಹಾಕಿದ್ದು, ಆಂಬುಲೆನ್ಸ್ ಆಸ್ಪತ್ರೆಗೆ ತೆರಳಿದ ಮೇಲೆ ಡ್ರೈವರ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ.  

ಸಾಂದರ್ಭಿಕ ಚಿತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!