ವರ್ಷಾಂತ್ಯಕ್ಕೆ ಮತ್ತೊಂದು ಆಘಾತ, ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನ

By Web DeskFirst Published Dec 28, 2018, 10:45 PM IST
Highlights

ವರ್ಷದ ಅಂತ್ಯಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಬಂದೆರಗಿದೆ. ಖಡಕ್ ಐಪಿಎಸ್ ಅಧಿಕಾರಿಯೊಬ್ಬರು ಎಚ್‌1 ಎನ್‌1ಗೆ ಬಲಿಯಾಗಿದ್ದಾರೆ.

ಬೆಂಗಳೂರು[ಡಿ.28]  ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ಹೈದರಾಬಾದ್​​​​ನಲ್ಲಿ ಕೊನೆ ಉಸಿರೆಳೆದಿದ್ದಾರೆ.  ಎಚ್​1ಎನ್​1, ಶ್ವಾಸಕೋಶದ ಸೋಂಕಿನಿಂದ ಬಳುತ್ತಿದ್ದ ಮಧುಕರ್ ಶೆಟ್ಟಿ  ಹೈದರಾಬಾದ್​​​​ನ ಕಾಂಟಿನೆಂಟಲ್​​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1 ವಾರದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 1999ರ ಬ್ಯಾಚ್​​ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ   ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಸೇರಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದರು.

ಎಚ್‌1 ಎನ್‌1 ಹಂದಿಜ್ವರದ ಲಕ್ಷಣಗಳು ಏನು?

ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್​ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ  2011ರಲ್ಲಿ ಉನ್ನತ ಶಿಕ್ಷಣಕ್ಕಾಗಿ ರಜೆ ಮೇಲೆ ತೆರಳಿದ್ದರು. 2011ರಲ್ಲಿ ಉನ್ನತ ಶಿಕ್ಷಣಕ್ಕಾಗಿ ರಜೆ ಮೇಲೆ ತೆರಳಿದ್ದ ಮಧುಕರ್​ ಶೆಟ್ಟಿ ನಂತರ ರಾಜ್ಯ ಐಜಿಪಿಯಾಗಿ ಬಡ್ತಿ ಪಡೆದಿದ್ದರು.

ಕೆಲ ಕಾಲ ಪೊಲೀಸ್​ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ 2017ರಿಂದ ಹೈದರಾಬಾದ್​​ ಪೊಲೀಸ್ ಅಕಾಡೆಮಿಯಲ್ಲಿ ಡೆಪ್ಯುಟಿ ಡೈರೆಕ್ಟರ್  ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.   18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಶಾಸಕ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. 

 

ನಮಗೆಲ್ಲಾ ಬೇಕಾಗಿದ್ದ ಮಧುಕರ ಶೆಟ್ಟಿ ಉಳಿಯಲಿಲ್ಲ ಎಂಬ ಸುದ್ಧಿ ಕೇಳಿ ಮನಸ್ಸು ಅಸ್ವಸ್ಥಗೊಂಡಿದೆ.

ನಮ್ಮ ರಾಜ್ಯಕ್ಕೆ ಅವರು ಅತ್ಯಗತ್ಯವಾಗಿ ಬೇಕಾಗಿದ್ದರು. ಅವರ ಸೇವೆ ಅಮೂಲ್ಯವಾಗಿತ್ತು. ಅವರು ಅತ್ಯಗತ್ಯವಾಗಿ ಉಳಿಯಬೇಕಿತ್ತು.

ಇನ್ನು ಅವರು ನೆನಪು ಮಾತ್ರ.

ಅವರ ಆತ್ಮಕ್ಕೆ ಶಾಂತಿ ದೊರಕಲಿ.‌ pic.twitter.com/YGo9Akstrk

— Sureshkumar (@nimmasuresh)

ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ನಿಧನ ಸುದ್ದಿ ಅತೀವ ನೋವು ತಂದಿದೆ.

ಮಧುಕರ್ ಶೆಟ್ಟಿಯವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/B8M2KRjDxM

— B.S. Yeddyurappa (@BSYBJP)

ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನಿಂದ ಆಘಾತಕ್ಕಿಡಾಗಿದ್ದೇನೆ. ಹಿರಿಯ ಪತ್ರಕರ್ತ ಮತ್ತು ನನ್ನ ಹಿತೈಷಿಯಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗ ಎನ್ನುವ ಕಾರಣದಿಂದಾಗಿ ನನಗೆ ಹೆಚ್ಚು ಪ್ರೀತಿಪಾತ್ರರಾಗಿದ್ದರು. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/MpoPxnqx2K

— Siddaramaiah (@siddaramaiah)

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ನಿಧನರಾದ ಸುದ್ದಿ‌ ಕೇಳಿ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.

— H D Devegowda (@H_D_Devegowda)
click me!