
ಶಿವಮೊಗ್ಗ (ಫೆ.14): ತೀರ್ಥಹಳ್ಳಿಯಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ನಿರೂಪಕ ಕಾಶಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ತಪ್ಪುಗ್ರಹಿಕೆಯಿಂದ ಖಾಸಿಂ ಎಂದು ಕರೆದು ಬಳಿಕ ತಮ್ಮ ತಪ್ಪಿನ ಅರಿವಾಗಿ ತಾವೇ ತಲೆ ಚಚ್ಚಿಕೊಂಡರು!
ಕಾಶಿ ಅವರು ಬಹುದಿನಗಳಿಂದ ಗಡ್ಡ ಬಿಟ್ಟಿದ್ದಾರೆ. ತೀರ್ಥಹಳ್ಳಿ ಸಮಾವೇಶದಲ್ಲಿ ವೇದಿಕೆ ಮೇಲಿದ್ದ ದೇವೇಗೌಡರು ನಿರೂಪಕರ ಹೆಸರೇನೆಂದು ಯಾರನ್ನೋ ಕೇಳಿದ್ದಾರೆ. ಅವರು ಕಾಶಿ ಎಂದು ಹೇಳಿದ್ದಾರೆ. ಆದರೆ,
ಅದನ್ನು ಮಾಜಿ ಪ್ರಧಾನಿಗಳು ಖಾಸಿಂ ಎಂದು ಕೇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಭಾಷಣ ಮಾಡುವಾಗ ಕಾಶಿ ಅವರನ್ನು ಹತ್ತಿರ ಕರೆದು ‘ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾನೆ ಈ ಹುಡುಗ’ ಎಂದು ಬೆನ್ನು ತಟ್ಟಿ ಹೆಗಲ ಮೇಲೆ ಕೈ ಹಾಕಿ ಮಾತು ಮುಂದುವರಿಸಿದರು.
‘ದೇಶದಲ್ಲಿ ಧರ್ಮ ಸಮನ್ವಯತೆ ಬೇಕು. ಖಾಸಿಂ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಆದರೆ, ವಿನಾ ಕಾರಣ ಧರ್ಮ ಸಮನ್ವಯತೆ ಹದಗೆಡುತ್ತಿದೆ’ ಎಂದು ಭಾಷಣ ಮಾಡಿದರು. ಅಷ್ಟೊತ್ತಿಗಾಗಲೇ ಸಭಿಕರು ಸೇರಿ ನೆರೆದಿದ್ದವರಿಗೆಲ್ಲ ಸತ್ಯ ಗೊತ್ತಾಗಿತ್ತು. ಆದರೆ, ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ. ಬಳಿಕ ದೇವೇಗೌಡರು ಭಾಷಣ ಮುಗಿಸಿ ಬಂದಾಗ ಕಾಶಿ ತಮ್ಮ ವಿಸಿಟಿಂಗ್ ಕಾರ್ಡ್ ನೀಡಿ ನನ್ನ ಹೆಸರು ‘ಕಾಶಿ’ ಎಂದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.