ಈಗಲ್ಟನ್ ರೆಸಾರ್ಟ್'ನಲ್ಲಿ 2 ಐರಾವತ ಬಸ್; ಗುಜರಾತ್ ಶಾಸಕರು ಬೇರೆಡೆ ಶಿಫ್ಟ್..?

Published : Aug 05, 2017, 09:15 AM ISTUpdated : Apr 11, 2018, 12:43 PM IST
ಈಗಲ್ಟನ್ ರೆಸಾರ್ಟ್'ನಲ್ಲಿ 2 ಐರಾವತ ಬಸ್; ಗುಜರಾತ್ ಶಾಸಕರು ಬೇರೆಡೆ ಶಿಫ್ಟ್..?

ಸಾರಾಂಶ

ಎರಡು ಐರಾವತ ಬಸ್ಸುಗಳು ರೆಸಾರ್ಟ್'ಗೆ ಬಂದಿವೆ. ಗುಜರಾತ್ ಶಾಸಕರನ್ನು ಕರೆದೊಯ್ಯಲು ಈ ಬಸ್ಸುಗಳು ಬಂದಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗುಜರಾತ್ ಶಾಸಕರನ್ನು ಬೆಂಗಳೂರು ಅಥವಾ ಮಡಿಕೇರಿಗೆ ಶಿಫ್ಟ್ ಮಾಡಬಹುದೆನ್ನಲಾಗಿದೆ. ಮಡಿಕೇರಿಗೆ ಶಾಸಕರನ್ನು ಕರೆದೊಯ್ಯುವುದು ನಿಶ್ಚಿತ ಎನ್ನುವಂಥ ಮಾಹಿತಿಯೂ ಸುವರ್ಣನ್ಯೂಸ್'ಗೆ ಸಿಕ್ಕಿದೆ.

ಬೆಂಗಳೂರು(ಆ. 05): ಐಟಿ ರೇಡ್'ಗೆ ತುತ್ತಾಗಿರುವ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್'ನಿಂದ ಗುಜರಾತ್ ಶಾಸಕರನ್ನು ಬೇರೆಡೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಎರಡು ಐರಾವತ ಬಸ್ಸುಗಳು ರೆಸಾರ್ಟ್'ಗೆ ಬಂದಿವೆ. ಗುಜರಾತ್ ಶಾಸಕರನ್ನು ಕರೆದೊಯ್ಯಲು ಈ ಬಸ್ಸುಗಳು ಬಂದಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗುಜರಾತ್ ಶಾಸಕರನ್ನು ಬೆಂಗಳೂರು ಅಥವಾ ಮಡಿಕೇರಿಗೆ ಶಿಫ್ಟ್ ಮಾಡಬಹುದೆನ್ನಲಾಗಿದೆ. ಮಡಿಕೇರಿಗೆ ಶಾಸಕರನ್ನು ಕರೆದೊಯ್ಯುವುದು ನಿಶ್ಚಿತ ಎನ್ನುವಂಥ ಮಾಹಿತಿಯೂ ಸುವರ್ಣನ್ಯೂಸ್'ಗೆ ಸಿಕ್ಕಿದೆ.

ಒಂದು ವಾರದಿಂದ ಗುಜರಾತ್ ಶಾಸಕರು ಈಗಲ್ಟನ್ ರೆಸಾರ್ಟ್'ನಲ್ಲಿದ್ದಾರೆ. ಡಿಕೆ ಶಿವಕುಮಾರ್ ಅವರೇ ಎಲ್ಲಾ ವ್ಯವಸ್ಥೆ ಮಾಡಿದ್ದರು. ಆದರೆ, ಮೂರು ದಿನಗಳ ಹಿಂದೆ ಐಟಿ ಇಲಾಖೆಯು ಡಿಕೆಶಿ ಮೇಲೆ ದಿಢೀರ್ ದಾಳಿ ನಡೆಸಿದೆ. ಡಿಕೆಶಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಸ್ಥಳ ಮತ್ತು ವ್ಯಕ್ತಿಗಳ ಮೇಲೆ ಐಟಿ ದಾಳಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಗುಜರಾತ್ ಶಾಸಕರು ಇರುವ ರೆಸಾರ್ಟ್ ಮೇಲೂ ಐಟಿ ದಾಳಿ ಮಾಡಿದೆ. ಇದು ರಾಷ್ಟ್ರಮಟ್ಟದ ಸುದ್ದಿಯಾಗಿ ಇಡೀ ದೇಶದ ಹೈಪ್ರೊಫೈಲ್ ಪ್ರಕರಣಗಳಲ್ಲೊಂದೆನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಲಲ್ಲೇ ಅರಳಿದ ಪ್ರೀತಿ: ಪೆರೋಲ್ ಪಡೆದು ಹಸೆಮಣೆ ಏರಿದ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು!
Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ